Advertisement
ಕನ್ನಡದ ಸಿನಿಮಾ ನಿರ್ದೇಶಕರೂ ಸಾಕಷ್ಟು ಮಂದಿಯಲ್ಲಿ ಈ ಸಂತೆಯಲ್ಲಿ ಕಂಡು ಬಂದಿದ್ದು ವಿಶೇಷ. ನಟ ಕಿಶೋರ್, ನಿರ್ದೇಶಕರಾದ ಪೃಥ್ವಿ ಕೊಣನೂರು, ನಟೇಶ್ ಹೆಗಡೆ, ಅಭಿಷೇಕ್ ಸರ್ಪೇಶ್ಕರ್ ತಮ್ಮ ಹೊಸ ಯೋಜನೆಯಲ್ಲಿ ತೊಡಗಿದ್ದರು.
ದಿ ನಾಲೆಡ್ಜ್ ಸೀರಿಸ್ ನಡಿ ಕೌಶಲಗಳ ಕುರಿತು ಮಾತನಾಡಿದ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಷಿ, ಮಧ್ಯಮ ವರ್ಗಗಳ ಕನಸುಗಳಿಗೆ ಸಿನಿಮಾಗಳಿಗೆ ರೂಪ ಕೊಡಬೇಕಿದೆ ಎಂದರಲ್ಲದೇ, ಸಿನಿಮಾ ಎಂದ ಕೂಡಲೇ ಜನರು ಸ್ಟಾರ್ ಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಜನರಿಗೆ ಸಿನಿಮಾ ಉದ್ಯಮವೆಂದರೆ ಅರ್ಪಣಾ ಮನೋಭಾವ, ಪ್ರೀತಿ, ಕೌಶಲಗಳೇ ಯಶಸ್ಸಿಗೆ ಮುಖ್ಯವೇ ಹೊರತು ಬೇರೇನೂ ಅಲ್ಲ ಎಂಬುದನ್ನು ಅರ್ಥ ಮಾಡಿಸಬೇಕು’ ಎಂದರು.
Related Articles
Advertisement
ಸಂವಾದದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಕ್ಯೂರೇಟರ್ ಜೋಶ್ ಸೆಗಲ್, ನ್ಯೂಯಾರ್ಕ್ನ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ಸ್ನ [ಮೋಮಾ], ಭಾರತದ ಪ್ರಯೋಗಶೀಲ ಸಿನಿಮಾಗಳನ್ನು ಜಾಗತಿಕ ನೆಲೆಯಲ್ಲಿ ಪ್ರೊಜೆಕ್ಟ್ ಮಾಡುವ ಕೆಲಸ ಮೊಮಾ ಮಾಡಲಿದೆ. ಪ್ರತಿ ವರ್ಷವೂ ನಾವು 1200 ವಿವಿಧ ಬಗೆಯ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದೇವೆ ಎಂದರು.
ನಟ ಅದಿಲ್ ಹುಸೇನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಭಾವನೆಗಳನ್ನು ನಿಯಂತ್ರಿಸುವುದೆಂದರೇ ಕಠಿಣ ಕೆಲಸ. ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು. ನಟನೆ ಎಂಬುದು ನೀರಿದ್ದಂತೆ. ಹಾಗಾಗಿ ಯುವ ಸಿನಿಮಾ ನಿರ್ದೇಶಕರು ನೀರಿನ ಗುಣಗಳಿಂದ ಕಲಿತುಕೊಳ್ಳಬೇಕಾದದ್ದಷ್ಟಿದೆ ಎಂದರು. ಇದಲ್ಲದೇ ನಿರ್ಮಾಪಕರ ಕಾರ್ಯಾಗಾರ ಇತ್ಯಾದಿ ಹಲವು ಚಟುವಟಿಕೆಗಳು ಭರದಿಂದ ನಡೆಯುತ್ತಿದ್ದು, ನ. 24ರವರೆಗೆ ಈ ಎಲ್ಲಾ ಚಟುವಟಿಕೆಗಳು ನಡೆಯಲಿವೆ.