Advertisement

ಸಾಂಸ್ಕೃತಿಕ ಜಾಂಬೂರಿ: ನೈಜ ಕಾಡಿನಲ್ಲೇ ಸಂಚರಿಸಿದ ಅನುಭವ ನೀಡುತ್ತೆ ಕೃತಕ ಕಾಡು!

11:11 AM Dec 26, 2022 | Team Udayavani |

ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಆಳ್ವಾಸ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಬೃಹತ್ ಮೇಳಗಳನ್ನು ತಲೆಯೆತ್ತಿವೆ. ಅವುಗಳಲ್ಲಿ ವಿಶೇಷವಾಗಿ ಕಂಡದ್ದು  ಕರ್ನಾಟಕದ ಅರಣ್ಯ ಇಲಾಖೆಯ ಸಹಕಾರದಿಂದ 7 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕೃತಕ ಕಾಡನ್ನು.

Advertisement

ಈ ಕಾಡನ್ನು ಕೇವಲ 10 ರಿಂದ 15 ದಿನಗಳಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ತುಳುನಾಡಿನ ನೃತ್ಯಕಲೆ ಹುಲಿ ಕುಣಿತದ ಪ್ರತಿಬಿಂಬವಾಗಿ, ಕಾಡಿನ ಮುಖ್ಯದ್ವಾರವನ್ನು ಹುಲಿಯ ಮುಖದ ಆಕಾರದಲ್ಲಿಯೇ ರಚಿಸಲಾಗಿದೆ.

ಒಳಗೆ ಹೋಗುತ್ತಿದ್ದಂತೆ, ಅರಣ್ಯ ಇಲಾಖೆಯ ಕಚೇರಿಯು ಹೇಗೆ ಇರುತ್ತದೆ ಎಂದು ತಿಳಿಸಲು ಪುಟ್ಟದಾದ ಕಚೇರಿಯು ಸಿಗುತ್ತದೆ. ಅಲ್ಲಿಯೇ ಒಂದು ಮೊಸಳೆ ಆಕಾರದ ಪ್ರತಿಕೃತಿ ಇದ್ದು, ಅದರ ಒಳಗಿಂದ ಹೊರ ಬರುವ ಸಂಚಾರ, ಸುರಂಗವನ್ನೇ ಪ್ರವೇಶಿಸಿದ ಅನುಭವ ನೀಡುತ್ತದೆ.

ಅಲ್ಲಿಂದ ಮುಂದಕ್ಕೆ, ಕರಡಿ ವೇಷದವರು ಎದುರಾಗುತ್ತಾರೆ. ಅದು ಪ್ರವಾಸಿಗರಿಗೆ, ಮುಖ್ಯವಾಗಿ ಮಕ್ಕಳಿಗೆ ಭಯದ ವಾತಾವರಣ ಸೃಷ್ಟಿಸುತ್ತದೆ.

ಅಲ್ಲಿಂದ ಮುಂದಕ್ಕೆ, ಭತ್ತದ ನಾಟಿಯ ಸೊಬಗನ್ನು ಕಾಣಬಹುದು ಹಾಗೂ ಅದರ ಪಕ್ಕದಲ್ಲಿ ಕಬ್ಬಿಣದ ಕಸುಬಿನ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಅಲ್ಲಿಯೇ ಮುಂದೆ ಹೋದಂತೆ ಹಿಂದಿನ ಕಾಲದ ಗುರುಕುಲ ಪದ್ಧತಿಯ ಬಗ್ಗೆ ಸಂಪೂರ್ಣ ಚಿತ್ರಣವನ್ನು ಒಂದೇ ಜಾಗದಲ್ಲಿ ತೋರಿಸಿದ್ದಾರೆ.

Advertisement

ಹಾಗೆಯೇ ಕೆಲವೊಂದು ವಿಶಿಷ್ಟ ಹಾವಿನ ಬಗ್ಗೆ ಮಾಹಿತಿಯ ಫಲಕಗಳನ್ನು ಮರಕ್ಕೆ ನೇತ್ತುಹಾಕಿದ್ದಾರೆ. ಅಲ್ಲಿನ ವಿಶಿಷ್ಟ ಸೆಳೆತವೆಂದರೆ ಸಹಜೀವನಕ್ಕಾಗಿ ಉದಾಹರಣೆಯಾಗಿ ಹುಲಿ ಜಿಂಕೆಯನ್ನು ಅಟ್ಟಿಸಿಕೊಂಡು ಬರುವುದು, ಅದಕ್ಕೆ ಮಂಗ ಸಂದೇಶವನ್ನು ನೀಡುವುದು ಈ ತರಹದ ವಿಶೇಷತೆಗಳನ್ನು ಇರಿಸಿದ್ದಾರೆ.

ಈ ಕಾಡಿನಲ್ಲಿ ಮತ್ತೊಂದು ವಿಶಿಷ್ಟತೆ ಎಂದರೇ ಅಲ್ಲಿ ಜಲಪಾತವನ್ನೂ ತುಂಬಾ ಸುಂದರವಾಗಿ ನಿರ್ಮಿಸಲಾಗಿದೆ. ಆ ಜಲಪಾತದ ನೀರು ಹರಿದು ಒಂದು ಕಡೆ ಸೇರುತ್ತದೆ. ಅಲ್ಲಿ ಮನುಷ್ಯನು ಮೀನನ್ನು ಹಿಡಿಯುವ ದೃಶ್ಯವನ್ನು ಕಾಣಬಹುದು. ಆ ಬಳಿಕ, ನಾವು ತೂಗು ಸೇತುವೆಯ ಮೇಲೆ ಸಂಚರಿಸಬಹುದು.

ಈ ಸೇತುವೆಯು ಎಲ್ಲರಿಗೂ ಭಯದ ವಾತಾವರಣದಲ್ಲಿ ಖುಷಿಯನ್ನೂ ನೀಡುತ್ತದೆ. ಸುಮಾರು 1.5 ಕಿಲೋಮೀಟರ್ ಟ್ರೆಕ್ಕಿಂಗ್ ಜಾಗವಾಗಿ ಮಾಡಿದ್ದು ಅಲ್ಲಿ ನಡೆಯುವಾಗ ಬೆಟ್ಟವನ್ನು ಹತ್ತಿ ಎಳಿಯುವ ಅನುಭವ ದೊರಕುತ್ತದೆ.

ಈ ಕೃತಕ ಕಾಡು ನಮಗೆ ಪೂರ್ತಿಯಾದ ಕಾಡಿನ ಅನುಭವವನ್ನು ನೀಡುತ್ತದೆ. ಅಲ್ಲಿಲ್ಲಿ ಪ್ರಾಣಿ ಪಕ್ಷಿಗಳ ಘರ್ಜನೆ ಹಾಗೂ ಕೂಗುವ ಶಬ್ದವನ್ನು ಇರಿಸಿದ್ದಾರೆ. ಇದು ಮಕ್ಕಳಿಗೆ ಹಾಗೂ ನೋಡುಗರಿಗೆ ಒಳ್ಳೆಯ ಅನುಭವ ಕೊಡುತ್ತದೆ.

ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿ ಪಕ್ಷಿಗಳಿಗೆ ಮನುಷ್ಯರಿಂದ ಬಹಳ ತೊಂದರೆ ಆಗುತ್ತಿದ್ದು, ಅವುಗಳು ನಾಡಿಗೆ ಬರುತ್ತಿರುವುದು ಕಷ್ಟವಾಗಿದೆ ಮತ್ತು ಪ್ರಾಣಿ ಪಕ್ಷಿಗಳು ನಶಿಸಿ ಹೋಗುತ್ತಿವೆ. ಆದ್ದರಿಂದ ಜನರಿಗೆ ಹಾಗು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಈ ಕೃತಕ ಕಾಡನ್ನು ನಿರ್ವಿಸಿದ್ದಾರೆ.

– ಧನುಶ್ರೀ ಗೌಡ

Advertisement

Udayavani is now on Telegram. Click here to join our channel and stay updated with the latest news.

Next