Advertisement

ಖಾತೆಗಳಲ್ಲಿ ಹಸ್ತಕ್ಷೇಪ: ಸಚಿವರ ಪರಸ್ಪರ ಆರೋಪ

01:56 AM Apr 17, 2020 | Sriram |

ಬೆಂಗಳೂರು: ಕೋವಿಡ್ 19 ನಿಯಂತ್ರಣ ಸಂದರ್ಭ ಸಚಿವರ ನಡುವಿನ ಪ್ರತಿಷ್ಠೆ ಬಯಲಾಗುತ್ತಿದ್ದು, ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ನಡುವಿನ ಶೀತಲ ಸಮರ ಇನ್ನೂ ಮುಂದುವರಿದಿರುವ ನಡುವೆಯೇ, ಈಗ ತೋಟಗಾರಿಕೆ ಸಚಿವ ನಾರಾಯಣ ಗೌಡ – ಸಹಕಾರ ಸಚಿವ ಎಸ್‌. ಟಿ. ಸೋಮಶೇಖರ್‌ ನಡುವೆ ಆರೋಪ-ಪ್ರತ್ಯಾರೋಪ ನಡೆದಿದೆ.

Advertisement

ಗುರುವಾರ ಡಿಸಿಎಂ ಡಾ| ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಾಗಾಟ ಹಾಗೂ ಮಾರಾಟ ಮಾಡುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿ ಸಲು ಕರೆದಿದ್ದ ಸಭೆಯಲ್ಲಿ ತೋಟ ಗಾರಿಕೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡು ತ್ತಿರುವ ಬಗ್ಗೆ ನಾರಾಯಣ ಗೌಡ ಆಕ್ಷೇಪ ಎತ್ತಿದ್ದು, ಈ ಸಂಬಂಧ ಇಬ್ಬರು ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ.

ತೋಟಗಾರಿಕೆ ಇಲಾಖೆಯಲ್ಲಿ ಹಸ್ತ ಕ್ಷೇಪ ಮಾಡುತ್ತಿರುವ ಬಗ್ಗೆ ನಾರಾಯಣ ಗೌಡ ಆಕ್ಷೇಪ ಎತ್ತಿರುವುದಕ್ಕೆ ಎಸ್‌. ಟಿ. ಸೊಮಶೇಖರ್‌ ತೋಟಗಾರಿಕೆಯು ಸಹಕಾರ ಇಲಾಖೆ ವ್ಯಾಪ್ತಿಗೂ ಬರು ತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅನಂತರ ಇಬ್ಬರನ್ನೂ ಅಶ್ವತ‌§ನಾರಾಯಣ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಸೋಮಶೇಖರ್‌, ಸಣ್ಣ ಪುಟ್ಟ ವಿಚಾರಗಳು ನಡೆಯುತ್ತಿರುತ್ತವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next