Advertisement

Indo-Canada: ಕೆನಡಾದಿಂದಲೂ ಹಸ್ತಕ್ಷೇಪ: ಭಾರತ ಆರೋಪ

11:39 PM Oct 05, 2023 | Pranav MS |

ಹೊಸದಿಲ್ಲಿ: ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾದ ಹಸ್ತಕ್ಷೇಪ ಹೆಚ್ಚಾಗಿದ್ದರಿಂದಲೇ ಆ ದೇಶದ ರಾಜತಾಂತ್ರಿಕ ಅಧಿಕಾರಿ ಗಳ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಸೂಚನೆ ನೀಡಲಾಗಿದೆ. ಹೀಗೆಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಭಗಿc ಹೇಳಿದ್ದಾರೆ. ಹೊಸದಿಲ್ಲಿ ಯಲ್ಲಿ ಮಾತನಾಡಿದ ಅವರು ಹೊಸದಿಲ್ಲಿಯಲ್ಲಿ ಇರುವ ಆ ದೇಶದ ಹೈಕಮಿಷನ್‌ ಕಚೇರಿಯಲ್ಲಿ ಮಿತಿಗಿಂತ ಹೆಚ್ಚು ಅಧಿಕಾರಿಗಳಿದ್ದಾರೆ. ಅವರಿಗೆ ಹೆಚ್ಚಿನ ಸ್ಥಾನ, ಮಾನ್ಯತೆ ನೀಡಲಾಗಿತ್ತು. ಇದೀಗ 2 ದೇಶಗಳಿಗೂ ಸಮನಾಗಿರುವ ಸಂಖ್ಯೆ ಯಲ್ಲಿ ಅಧಿಕಾರಿಗಳನ್ನು ಹೊಂದುವ ಬಗ್ಗೆ ಮಾತುಕತೆ ನಡೆಸಲಾ ಗು ತ್ತಿದೆ ಎಂದು ಅವರು ಹೇಳಿದ್ದಾರೆ.

Advertisement

ರಾಯಭಾರ ಕಚೇರಿ ತಿರಸ್ಕಾರ: ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಹೊಸದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ತಮ್ಮ ತಂಡಕ್ಕೆ ಮುನ್ಸೂಚನೆ ನೀಡಿದ್ದರು ಎಂಬ ವಾದವನ್ನು ರಾಯಭಾರ ಕಚೇರಿ ತಿರಸ್ಕರಿಸಿದೆ. ಇದರಿಂದಾಗಿ ಅಮೆರಿಕ-ಭಾರತ ನಡುವಿನ ಬಾಂಧವ್ಯಕ್ಕೂ ಧಕ್ಕೆಯಾಗದು ಎಂದೂ ಹೇಳಿದೆ.

ವ್ಯಕ್ತಿ ಬಂಧನ: ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ಖಲಿಸ್ಥಾನಿ ಉಗ್ರರು ಮಾರ್ಚ್‌ನಲ್ಲಿ ನಡೆಸಿದ್ದ ದಾಳಿಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬನನ್ನು ಸ್ಕಾಟ್‌ಲ್ಯಾಂಡ್‌ ಪೊಲೀಸರು ಬಂಧಿಸಿದ್ದಾರೆ.

ಟ್ರಾಡೊ ಅನುಚಿತ ವರ್ತನೆ
ಕೆನಡಾದ ಹೌಸ್‌ಆಫ್ ಕಾಮನ್ಸ್‌ನಲ್ಲಿ ಕಲಾಪ ನಡೆಯುತ್ತಿದ್ದಾಗ ಸ್ಪೀಕರ್‌ ಫ‌ರ್ಗುಸ್‌ ಟ್ರೂಡೊರನ್ನು ಗೌರವಾನ್ವಿತ ಪ್ರಧಾನಿ ಎಂದು ಸಂಬೋಧಿಸಿದ್ದಾರೆ ಈ ವೇಳೆ ಟ್ರಾಡೊ ಬಹು ಗೌರವಾನ್ವಿತ ಎಂದು ತಿದ್ದುಪಡಿ ಮಾಡಿ ಕಣ್ಣು ಮಿಟುಕಿಸಿ ನಾಲಿಗೆ ಕಚ್ಚಿಕೊಂಡು ನಕ್ಕಿದ್ದಾರೆ. ಪ್ರಧಾನಿ ಎಂಬುದನ್ನೇ ಮರೆತು ಅಸಂಸದೀಯವಾಗಿ ವರ್ತಿಸಿರುವ ಟ್ರಾಡೊ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next