Advertisement
ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದ ಯು.ಟಿ. ಫರೀದ್ ಕಾಲೇಜು ದಿನಗಳಲ್ಲೇ ಕಾಂಗ್ರೆಸ್ ಕಾರ್ಯಕರ್ತನಾಗಿ 30ರ ಹರೆಯದಲ್ಲೇ ಶಾಸಕರಾಗಿ ಆಯ್ಕೆಯಾದವರು. ಅಂದಿನ ಕಾಂಗ್ರೆಸ್ ಚಿಹ್ನೆಯಾಗಿದ್ದ ದನ ಮತ್ತು ಕರು (ಪೆತ್ತ ಕಂಜಿ) ಅಡಿಯಲ್ಲಿ 1972ರಲ್ಲಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಎರಡನೇ ಬಾರಿಗೆ 1978ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ದೀರ್ಘ ಕಾಲದ ಬಳಿಕ (16 ವರ್ಷಗಳು) 1999ರಲ್ಲಿ ಎಸ್.ಎಂ. ಕೃಷ್ಣ ಅವಧಿಯಲ್ಲಿ ಶಾಸಕರಾಗಿದ್ದ ಅವರು 2004ರಲ್ಲಿ ನಾಲ್ಕನೇ ಬಾರಿಗೆ ಶಾಸಕರಾದರು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಅನಾರೋಗ್ಯದಿಂದ ಶಾಸಕರಾಗಿ ಅಧಿಕಾರದಲ್ಲಿದ್ದಾಗಲೇ ನಿಧನಹೊಂದಿದ್ದರು.
ಓರ್ವರಾಗಿದ್ದರು. ಹರೇಕಳ ಅಂಬ್ಲಿಮೊಗರು, ರೆಂಜಾಡಿ, ಸಹಿತ ಅನೇಕ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಸೇತುವೆ ಮೂಲಕ ಮೂಲಸೌಕರ್ಯ, ಸಂತೋಷ್ನಗರ, ಎಕ್ಕೂರುಗುಡ್ಡೆ, ಸುಭಾಷ್ನಗರ, ಅಸೈಗೋಳಿಯಲ್ಲಿ ಸೈಟ್ ನಿರ್ಮಿಸಿ ಹಕ್ಕುಪತ್ರ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ನಮ್ಮ ತಂದೆ ಎನ್ನುತ್ತಾರೆ ಝೀನತ್ ಅವರು. ಸಾಮಾಜಿಕ ಕಾರ್ಯರ್ತ ಮತ್ತು ಗುತ್ತಿಗೆದಾರರಾಗಿದ್ದ ನಮ್ಮ ತಾಯಿಯ ತಂದೆ (ಫರೀದ್ ಅವರ ಪತ್ನಿ ನಸೀಮಾ ಫರೀದ್ ಅವರ ತಂದೆ) ಅಬ್ದುಲ್ ಕಡಬಕಾರ್ ಅವರ ಬೆಂಬಲವೇ ರಾಜಕೀಯ ಪ್ರವೇಶಿಸಿ ಶಾಸಕರಾದವರು. ಬಳಿಕ ಅವರ ಸ್ವವರ್ಚಸ್ಸಿನಿಂದ ಮೂರು ಬಾರಿ ಶಾಸಕರಾದ ವರು. ಅಂದಿನ ಕಾಲದಲ್ಲಿ ಕಾಂಗ್ರೆಸ್ ಮುಖಂಡರಾದ ಅಝೀಝ್ ಸೇಠ್, ಮಲ್ಲಿಕಾರ್ಜುನ ಖರ್ಗೆ, ಕಾಪು ಭಾಸ್ಕರ ಶೆಟ್ಟಿ, ಬಿ.ಎ. ಮೊಯಿದಿನ್, ಶ್ರೀಕಂಠಯ್ಯ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಮುಖಂಡರ ಒಡನಾಟವನ್ನು ನಮ್ಮ ತಂದೆಯವರು ಹೊಂದಿದ್ದರು.
Related Articles
Advertisement
— ವಸಂತ ಕೊಣಾಜೆ