Advertisement

ವಿಶ್ವನಾಥ್‌ ಧರಿಸಿರುವ ಲಾಕೆಟ್‌ ಬಗ್ಗೆ ಕುತೂಹಲ 

06:00 AM Oct 01, 2018 | |

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹಾಕಿಕೊಂಡಿರುವ “ಗೂಬೆ’ ಪ್ರತಿರೂಪದ ಚಿನ್ನದ ಲಾಕೆಟ್‌ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Advertisement

ಅಥೆನ್ಸ್‌ ರಾಜ್ಯಾಡಳಿತ ಕೃತಿ ಬರೆಯಲು ಗ್ರೀಕ್‌ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ಸರ್ಕಾರ ನೀಡಿದ್ದ ಚಿನ್ನದ ಲಾಕೆಟ್‌ ಧರಿಸಿದ ನಂತರ ವಿಶ್ವನಾಥ್‌ ಅವರಿಗೆ ಅದೃಷ್ಟ ಖುಲಾಯಿಸಿತು. 2017ರಲ್ಲಿ ಅವರು ಗ್ರೀಕ್‌ನಿಂದ ಹಿಂತಿರುಗಿ ಬಂದು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರ್ಪಡೆಯಾದ ನಂತರ ಶಾಸಕರಾದರು, ಜೆಡಿಎಸ್‌ ರಾಜ್ಯಾಧ್ಯಕ್ಷರಾದರು.

ಹೀಗಾಗಿ, ಅವರ ಲಾಕೆಟ್‌ ಬಗ್ಗೆ ನಾನಾ ರೀತಿಯ ವಾಖ್ಯಾನಗಳು ಕೇಳಿಬರುತ್ತಿವೆ. ಗೂಬೆ ಲಾಂಛನ ಧರಿಸುವುದು ಅಪಶಕುನ ಎಂದು ವಿಶ್ವನಾಥ್‌ ಅವರಿಗೆ ಕೆಲವರು ಹೇಳಿದ್ದರು. ಆದರೆ, ಅವರು ಅದಕ್ಕೆ ತಲೆಕೆಡಿಸಿಕೊಳ್ಳದೆ ಧರಿಸಿದ್ದರು. ಅದರಿಂದಾಗಿ ಅವರಿಗೆ ಅದೃಷ್ಟ ಖುಲಾಯಿಸಿತು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next