Advertisement

8 ಮಂದಿ ಪತ್ತೆಗಾಗಿ ತೀವ್ರ ಶೋಧ

11:36 PM Aug 11, 2019 | Team Udayavani |

ವೀರಾಜಪೇಟೆ: ತಾಲೂಕಿನ ತೋರ ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ನಾಪತ್ತೆಯಾಗಿರುವ ಎಂಟು ಮಂದಿಯ ಪತ್ತೆಗಾಗಿ ರಕ್ಷಣಾ ತಂಡಗಳಿಂದ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಶೋಧ ಕಾರ್ಯ ನಡೆಯುತ್ತಿದೆ. ಮಹಾಮಳೆಗೆ ಸಿಲುಕಿ ಕಳೆದ ಶುಕ್ರವಾರ ತೋರ ಗ್ರಾಮದಲ್ಲಿ ಬೆಟ್ಟ ಪ್ರದೇಶ ಭಾರೀ ಕುಸಿತಕ್ಕೆ ಒಳಗಾಗಿ ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ನಾಪತ್ತೆಯಾಗಿದ್ದರು.

Advertisement

ಭಾರೀ ಮಳೆಯಿಂದ ರಕ್ಷಣಾ ತಂಡಗಳಿಗೆ ದುರ್ಘ‌ಟನೆ ನಡೆದ ಸ್ಥಳಕ್ಕೆ ತೆರಳುವುದೇ ಅಸಾಧ್ಯವಾಗಿತ್ತಾದರೂ, ಸಾಹಸದ ಪ್ರಯತ್ನದ ಮೂಲಕ ಸ್ಥಳಕ್ಕೆ ತೆರಳಿದ ರಕ್ಷಣಾ ತಂಡ, ತಾಯಿ-ಮಗಳ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿತ್ತು. ಉಳಿದವರ ಪತ್ತೆ ಕಾರ್ಯ ಇನ್ನೂ ಸಾಧ್ಯವಾಗಿಲ್ಲ. ಭೂ ಕುಸಿತ ಎಷ್ಟರಮಟ್ಟಿಗೆ ಭೀಕರವಾಗಿದೆಯೆಂದರೆ ಗುಡ್ಡ ಕುಸಿತಕ್ಕೆ ಸಿಲುಕಿ ನಾಶವಾದ ಮನೆಗಳ ಗುರುತು ಪತ್ತೆಯೇ ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next