Advertisement

ಮೋದಿ-ಶಾಗೆ ಅವಮಾನ: ಪತ್ರಕರ್ತರ ವಿರುದ್ಧ ಕೇಸ್‌

10:35 PM Jan 25, 2020 | Lakshmi GovindaRaj |

ಗಂಗಾವತಿ: ಆನೆಗೊಂದಿ ಉತ್ಸವದ ವಿದ್ಯಾರಣ್ಯ ವೇದಿಕೆಯ ಕವಿಗೋಷ್ಠಿಯಲ್ಲಿ ಸಿಎಎ-ಎನ್‌ಆರ್‌ಸಿ ಕುರಿತು ಕವನ ವಾಚಿಸಿ, ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಅವಮಾನಿಸಿದ ಪತ್ರಕರ್ತರಿಬ್ಬರ ವಿರುದ್ಧ ಬಿಜೆಪಿ ಮುಖಂಡ ಮಡ್ಡೇರ್‌ ಶಿವುಕುಮಾರ ಅರಿಕೇರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಖಾಸಗಿ ವಾಹಿನಿಯ ಜಿಲ್ಲಾ ವರದಿಗಾರ ಸಿರಾಜ್‌ ಬಿಸರಳ್ಳಿ ಹಾಗೂ ಕನ್ನಡ ಡಾಟ್‌ ನೆಟ್‌ ಸಂಪಾದಕ ರಾಜಾಭಕ್ಷಿ ಅವರು ಪೌರತ್ವ ಕಾಯ್ದೆ ವಿರೋಧಿ ಸುವ ಕವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಅವಮಾನಕರವಾಗಿ ಕವನ ವಾಚಿಸಿದ್ದಾರೆ. ಬಳಿಕ ಅದನ್ನು ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ ಮೂಲಕ ಹರಿಬಿಡಲಾಗಿದೆ. ಈ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next