Advertisement

ಕಾಮಗಾರಿ ಬಾಕಿ ಇರದಂತೆ ಕೆಲಸ ಮಾಡಲು ಸೂಚನೆ

04:22 PM Oct 21, 2019 | Team Udayavani |

ಕಾರವಾರ: ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಲ್ಲಿರುವಂತಹ ಕಾಮಗಾರಿಗಳ ಕಾರ್ಯ ಯಾವುದೇ ಕಾರಣಕ್ಕೂ ಬಾಕಿ ಇರದಂತೆ ನೋಡಿಕೊಳ್ಳಬೇಕೆಂದು ಸಂಸದ ಅನಂತಕುಮಾರ ಹೆಗಡೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಕಿ ಇದ್ದಂತಹ ಕಾಮಗಾರಿಗಳನ್ನು ಪಿಆರ್‌ಡಿಒ ಅನುಷ್ಠಾನಾಧಿಕಾರಿಗಳು ಆದ್ಯತೆ ಅನುಸಾರ ಶೀಘ್ರ ಪೂರ್ಣಗೊಳಿಸಬೇಕು. ಪೂರ್ಣಗೊಳಿಸುವಲ್ಲಿ ಇನ್ನಿತರೆ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಜಿಲ್ಲಾಧಿಕಾರಿ ಅಥವಾ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದರು. ಕಾಮಗಾರಿಗಳ ಗುಣಮಟ್ಟವನ್ನೂ ಪರಿಶೀಲಿಸಬೇಕು ಮತ್ತು 2 ಲಕ್ಷ ಒಳಗೆ ಇರುವಂತಹ ಕಾಮಗಾರಿ ತಹಶೀಲ್ದಾರ್‌ ಗ್ರೇಡ್‌-2 ಹಾಗೂ 5 ಲಕ್ಷ ಮೇಲ್ಪಟ್ಟ ಕಾಮಗಾರಿಗಳನ್ನು ಪಾಲಿಟೆಕ್ನಿಕ್‌ ತೃತೀಯ ತಪಾಸಣಾ (ಏಜನ್ಸಿ ಮುಖಾಂತರ) ಮಾಡಿಸುವ ಮೂಲಕ ಕೆಲಸ ಬೇಗ ಆಗುವಂತೆ ಮಾಡಬೇಕೆಂದು ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.

16ನೇ ಲೋಕಸಭೆಯಲ್ಲಿ 2017-2018ನೇ ಸಾಲಿನ 2.5 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಸದರಿ ಸಾಲಿನ 2ನೇ ಕಂತು ಮತ್ತು 2018-19ನೇ ಸಾಲಿನ ಪೂರ್ಣ ಅನುದಾನ ಬಿಡುಗಡೆಗೆ ಬಾಕಿ ಇರುತ್ತದೆ. ಕಾರಣ ಈಗಾಗಲೇ ಕೊಟ್ಟಿರುವಂತಹ ಅನುದಾನದ ಕಾಮಗಾರಿ ಆದಷ್ಟು ಬೇಗ ಮುಗಿಸಿ ಕೊಟ್ಟಲ್ಲಿ ಮುಂದಿನ ಪೂರ್ಣ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

14ನೇ ಲೋಕಸಭಾ ಸದಸ್ಯರ ಅನುದಾನವನ್ನು 16ನೇ ಲೋಕಸಭಾ ಸದಸ್ಯರಿಗೆ ಮರು ಹಂಚಿಕೆ ಮಾಡಲಾದ ಅನುದಾನದಿಂದ ಮಂಜೂರಾತಿ ನೀಡಿದ ಕಾಮಗಾರಿಗಳ ಶೇ.25 ಪ್ರಸ್ತಾವನೆ ಬರಲು ಬಾಕಿ ಇರುವ ಕಾಮಗಾರಿಯಾದ ಕುಮಟಾ ತಾಲೂಕಿನ ಅಳಕೋಡ ಪಂಚಾಯತಿಯ ಯಾಣಾದ ಮರಾಠಿಕೇರಿ ಹತ್ತಿರದ ಹಳ್ಳಕ್ಕೆ ಪೈಪ್‌ ಹಾಗೂ ಮೋರಿ ನಿರ್ಮಾಣ ಮಾಡುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿಯನ್ನು ಆಗಸ್ಟ್‌ ತಿಂಗಳಲ್ಲೇ ನೀಡಲಾಗಿದ್ದು, ಕಾರ್ಯನಿರ್ವಾಹಕ ಇಂಜಿನೀಯರ್‌ ಪಂ.ರಾ.ಇಂ ವಿಭಾಗ ಶಿರಸಿ ಇವರು ಅನುಷ್ಠಾನಾಧಿಕಾರಿಯಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಸಂಸದರಿಗೆ ಮಾಹಿತಿ ನೀಡಿದರು. ವಿವಿಧ ಇಲಾಖೆಅನುಷ್ಠಾನಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next