Advertisement

ಲೋಕಸಭಾ ಉಸ್ತುವಾರಿ ಶೀಘ್ರ ಬದಲು: ಈಶ್ವರಪ್ಪ

06:50 AM Dec 01, 2018 | |

ಧಾರವಾಡ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಕ್ಷೇತ್ರವಾರು ಉಸ್ತುವಾರಿ ಕೊಟ್ಟಿದ್ದು, ಕೆಲವೊಂದಿಷ್ಟು ಬದಲಾವಣೆಗೆ ಕೆಲವರಿಂದ ಅಭಿಪ್ರಾಯ ವ್ಯಕ್ತವಾಗಿರುವ ಕಾರಣ ಬದಲಾವಣೆ ಆಗಬಹುದು ಎಂದು ಬಿಜೆಪಿ ನಾಯಕ, ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರದ ಮುರುಘಾಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರಕ್ಕೆ ಯಾರನ್ನು ಉಸ್ತುವಾರಿ ಮಾಡಿದರೆ ಲಾಭ ಆಗುತ್ತದೆ ಎಂಬ ಬಗ್ಗೆ ವಿಚಾರ ಮಾಡಿ ಅಂತಿಮ ನಿರ್ಣಯ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು, 106 ತಾಲೂಕುಗಳಲ್ಲಿ ಬರ ಇದೆ. ಆದರೆ, ರಾಜ್ಯ ಸರ್ಕಾರ ಈ ವಿಷಯದಲ್ಲಿ ಏನೂ ಮಾಡುತ್ತಿಲ್ಲ. ನೀರಿನ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಸಭೆ ಮಾಡುತ್ತಿಲ್ಲ. ಬರಗಾಲದ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿಯಿಂದಲೇ ಐದು ತಂಡ ರಚನೆ ಮಾಡಿದ್ದು, ಈ ತಂಡಗಳು ಡಿ.3, 4, 5ರಂದು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next