ಬೆಂಗಳೂರು: ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿಯ ಬಸ್ಗಳ ‘ಲುಕ್’ ಬದಲಾಯಿಸಲು ಹಾಗೂ ಇನ್ಮುಂದೆ ಹೊಸ ವಿನ್ಯಾಸದ ಬಸ್ ಖರೀದಿಗೆ ಸರ್ಕಾರ ನಿರ್ಧ ರಿಸಿದೆ. ಖಾಸಗಿ ಬಸ್ಗಳ ಜತೆ ಪೈಪೋಟಿ ನಡೆಸಲು ಮುಂಭಾಗ ಹೊಸ ವಿನ್ಯಾಸ ಹಾಗೂ ಒಳಾಂಗಣವೂ ಆಕರ್ಷಕವಾಗಿರಿಸಲು ತೀರ್ಮಾನಿಸಿದೆ.
ಪ್ರಸ್ತುತ 3,700 ಬಸ್ಗಳ ಖರೀದಿಗೆ ತೀರ್ಮಾನಿ ಸಲಾಗಿದ್ದು ಆ ಬಸ್ಗಳು ಹೊಸ ವಿನ್ಯಾಸದಡಿ ಇರಲಿ ಎಂಬ ಉದ್ದೇಶ ಹೊಂದಲಾಗಿದೆ.
ನಮ್ಮ ಬಸ್ಗಳ ವಿನ್ಯಾಸ ಬದಲಾಯಿಸಿ ಪ್ರಯಾಣಿಕರನ್ನು ಆಕರ್ಷಿಸಬೇಕಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ಬಸ್ ನಿಲ್ದಾಣ: ರಾಜ್ಯದಲ್ಲಿ ಹೊಸದಾಗಿ ಘೋಷಿಸಿರುವ ತಾಲೂಕುಗಳಲ್ಲಿ ಬಸ್ ನಿಲ್ದಾಣಗಳ ಜತೆಗೆ ವಾಣಿಜ್ಯ ಸಂಕೀರ್ಣ ಸ್ಥಾಪಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಮೈಸೂರು, ಮಂಡ್ಯ, ಹಾಸನ ಸೇರಿ ಪ್ರಸ್ತುತ ತಾಲೂಕು ಕೇಂದ್ರಗಳಲ್ಲಿರುವ ಬಸ್ ನಿಲ್ದಾಣ ಸಹ ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ 250 ಕೋಟಿ ರೂ. ನೆರವು ನೀಡುವಂತೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಮಿಕರಿಗೆ ರಿಯಾಯಿತಿ ದರದ ಪಾಸ್ ನೀಡುವ ಜತೆಗೆ ಬಿಪಿಎಲ್ ಕುಟುಂಬಗಳಿಗೂ ರಿಯಾಯಿತಿ ದರದ ಬಸ್ ಪಾಸ್ ವ್ಯವಸ್ಥೆ ಜಾರಿಗೆ ತರಲು ಸಾರಿಗೆ ಇಲಾಖೆ ಚಿಂತಿಸಿದೆ.