Advertisement

ಅಲೆಮಾರಿಗಳ ತಪಾಸಣೆ

05:25 PM Apr 09, 2020 | Suhan S |

ಹುಣಸೂರು: ಉದ್ಯೋಗಕ್ಕಾಗಿ ನಗರಗಳಿಗೆ ತೆರಳಿದ್ದ ನೂರಾರು ಮಂದಿ ವಾಪಾಸಾಗಿರುವ ಹಾಗೂ ಅಲೆಮಾರಿಗಳ ಆರೋಗ್ಯ ತಪಾಸಣೆ ಮಾಡಿ, ಆರೋಗ್ಯ ಮಾಹಿತಿ ನೀಡಲಾಯಿತು.

Advertisement

ತಾಲೂಕಿನ ಹನಗೋಡು ಸೇರಿದಂತೆ ಅಕ್ಕಪಕ್ಕದ ಗ್ರಾಮದ 130ಕ್ಕೂ ಹೆಚ್ಚು ಯುವಕರು ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಳ್ಳಿಗಳಿಗೆ ಮರಳಿರುವ ಯುವಕರನ್ನು ಸ್ನೇಹಜೀವಿ ಮಂಜುನಾಥ್‌ ಬಳಗದ ಸ್ವಯಂಸೇವಕರು ಗುರುತಿಸಿ, ಹನಗೋಡು ಗ್ರಾಪಂ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಹನಗೋಡಿನ ಆಸ್ಪತ್ರೆ ವೈದ್ಯ ಡಾ.ಜೋಗೆಂದ್ರನಾಥ್‌, ಆರೋಗ್ಯ ಸಂಚಾರಿ ವಾಹನದ ವೈದ್ಯ ಡಾ.ಮಹಮದ್‌ ಅಜಾದ್‌ ತಂಡ ಯುವಕರ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿದರು.

ಆರೋಗ್ಯ ಇಲಾಖೆ ಜಯಂತಿ, ಸ್ನೇಹಜೀವಿ ಬಳಗದ ಸಂತೋಷ್‌, ಗಣೇಶ್‌, ಕಾಂತರಾಜ್‌, ಮಂಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next