Advertisement

ರೈಲ್ವೆ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ದಳದಿಂದ ಪರಿಶೀಲನೆ

03:37 PM Aug 07, 2019 | Team Udayavani |

ಶ್ರೀರಂಗಪಟ್ಟಣ: ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಹಿನ್ನೆಲೆ ರೈಲು ನಿಲ್ದಾಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಬಾಂಬ್‌ ಪತ್ತೆ ತಂಡದ ಸಿಬ್ಬಂದಿ ಶ್ವಾನುನೊಂದಿಗೆ ಪರಿಶೀಲನೆ ಮಾಡಿದರು.

Advertisement

ರೈಲ್ವೆ ನಿಲ್ದಾಣದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಜಾಗೃತಗೊಳಿಸಲು ಮಂಡ್ಯದ ಎಎಸ್‌ಸಿ ತಂಡ ಶ್ವಾನದೊಂದಿಗೆ ಆಗಮಿಸಿ, ರೈಲ್ವೆ ಹಳಿ, ವಿಶ್ರಾಂತಿ ಕೊಠಡಿ, ಕಸದ ಬುಟ್ಟಿ, ಅನುಮಾನಾಸ್ಪದ ಬ್ಯಾಗ್‌, ಪ್ರಯಾಣಿಕರು ತರುವ ಬ್ಯಾಗ್‌ ಸೇರಿದಂತೆ ಇತರ ನಿಲ್ದಾಣದ ಸುತ್ತಲು ಪರಿಶೀಲನೆ ನಡೆಸಿದರು.

ತಂಡದ ಬೆಟ್ಟಸ್ವಾಮಿ ಮಾತನಾಡಿ, ಪ್ರತಿ ತಿಂಗಳು ಅಥವಾ ವಾರದಲ್ಲೊಮ್ಮೆ ಜಿಲ್ಲೆಯ ಎಲ್ಲಾ ರೈಲ್ವೆ ನಿಲ್ದಾಣಗಳಿಗೂ ಭೇಟಿ ನೀಡಿ ಪ್ರಯಾಣಿಕರ ಹಿತಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸಲಾಗುತ್ತದೆ. ಜಿಲ್ಲೆಯ ಎಲ್ಲಾ ನಿಲ್ದಾಣಗಳಲ್ಲೂ ಬಾಂಬ್‌ ಪತ್ತೆ ಹಾಗೂ ಶ್ವಾನಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು. ಈ ವೇಳೆ ರಾಜು, ಮಂಜುನಾಥ್‌ ಮತ್ತಿತತರ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next