Advertisement

ಬೇಡಿಕೆ ಈಡೇರಿಕೆಗೆ ಒತ್ತಾಯ

11:59 AM Dec 17, 2019 | Suhan S |

ಚಿತ್ತಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೊಂಗಿರಣ ತಾಲೂಕು ಹಿರಿಯ ನಾಗರಿಕ ಹಾಗೂ ವಯೋ ವೃದ್ಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್‌ ಇಬ್ರಾಹಿಂ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಚಿತ್ತಾವಲಿ ಚೌಕ್‌, ಕಪಡಾ ಬಜಾರ್‌, ಜನತಾ ಚೌಕ್‌, ಭುವನೇಶ್ವರಿ ಚೌಕ್‌, ಅಂಬೇಡ್ಕರ್‌ ಚೌಕ್‌, ಬಸ್‌ ನಿಲ್ದಾಣ, ಬಸವೇಶ್ವರ ಚೌಕ್‌ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಕಚೇರಿಗೆ ತಲುಪಿತು. ಪಡಿತರ ವಿತರಣೆಯಲ್ಲಿ ಸಕ್ಕರೆ, ಗೋಧಿ, ಎಣ್ಣೆ, ತೊಗರಿ ಬೇಳೆ, ಉಪ್ಪು ವಿತರಿಸಬೇಕು. ವಿಧವಾ, ವೃದ್ಧಾಪ, ಸಂಧ್ಯಾ ಸುರಕ್ಷಾ, ಅಂಗವಿಕಲ ಫಲಾನುಭವಿಗಳಿಗೆ 3 ಸಾವಿರ ರೂ. ಮಾಶಾಸನ ಹೆಚ್ಚಳ ಮಾಡಬೇಕು. ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು 1 ಲಕ್ಷ ರೂ. ಸಹಾಯ ಧನ ನೀಡಬೇಕು. ಹಿರಿಯ ನಾಗರಿಕರಿಗೆ, ಜಾನಪದ ಕಲಾವಿದರಿಗೆ ಉಚಿತ ಬಸ್‌ ಪಾಸ್‌ ವಿತರಿಸಬೇಕು. ಜಾನಪದ ಕಲಾವಿದರ ಮಾಶಾಸನ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಕಲಾವಿದರಿಗೆ ಕೇಂದ್ರದ ಮಾಶಾಸನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು. ನಿರ್ಲಕ್ಷ್ಯ ವಹಿಸಿದರೇ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಮನವಿ ಪತ್ರವನ್ನು ತಹಶೀಲ್ದಾರ್‌ ಮೂಲಕ ಪ್ರಧಾನಿಗೆ ಸಲ್ಲಿಸಿದರು.

ಮಲ್ಲಿಕಾರ್ಜುನ ಪಾಟೀಲ, ಸಂತೋಷ ಕುಮಾರ, ಅಂಬಾರಾಯ, ಬಸವರಾಜ, ಯಲ್ಲಮ್ಮ, ಮೌಲಾ, ಮರೇಪ್ಪ, ನಾಗಪ್ಪ, ಮಲ್ಲೇಶಿ, ಈರಮ್ಮ, ಶರಣಪ್ಪ, ರಾಮು, ಮಕಬೂಲ್‌, ಗುರುಪಟೇಲ್‌, ಗಂಗೂಬಾಯಿ, ಮಹೇಬೂಬಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next