Advertisement

ಬೀಡಿ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯ

08:06 AM Jun 22, 2020 | Suhan S |

ಹರಿಹರ: ಕೋವಿಡ್‌-19 ವಿಪತ್ತು ಪರಿಹಾರವಾಗಿ ಬೀಡಿ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಪರಿಹಾರ ವಿತರಿಸಬೇಕೆಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಒತ್ತಾಯಿಸಿದೆ.

Advertisement

ಲಾಕ್‌ಡೌನ್‌ ಆರಂಭವಾದ ಕಳೆದ 3 ತಿಂಗಳಿನಿಂದ ಬೀಡಿ ಕಾರ್ಮಿಕರಿಗೆ ಉದ್ಯೋಗವಿಲ್ಲದಂತಾಗಿದೆ. ಈಗ ಲಾಕ್‌ಡೌನ್‌ ತೆರವಾಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷದಿಂದ ಬೀಡಿ ತಯಾರಿಕೆಗೆ ಎಲೆ ಮತ್ತು ತಂಬಾಕು ಪದಾರ್ಥಗಳು ದೊರೆಯದಾಗಿದೆ. ಇದರಿಂದ ಬೀಡಿ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಆದ್ದರಿಂದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಹಣದಿಂದ ಬೀಡಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ತಲಾ 5 ಸಾವಿರ ರೂ. ಜಮಾ ಮಾಡಬೇಕು. ಬೀಡಿ ಕಾರ್ಮಿಕರಿಗೆ ನಿರಂತರವಾಗಿ ಉದ್ಯೋಗ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಬೀಡಿ ಕಂಪನಿಗಳು ಮತ್ತು ಗುತ್ತಿಗೆದಾರರಿಂದ ಸೆಸ್‌ ಸಂಗ್ರಹಿಸಬೇಕು. ದಾವಣಗೆರೆಯಲ್ಲಿ ಬೀಡಿ ಕಾರ್ಮಿಕ ಚಿಕಿತ್ಸಾಲಯ ತೆರೆಯಬೇಕೆಂದು ಮಂಡಳಿಯ ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next