Advertisement

ಬೇಡಿಕೆ ಈಡೇರಿಸುವಂತೆ ಒತ್ತಾಯ

12:31 PM Mar 03, 2022 | Team Udayavani |

ಹುಮನಾಬಾದ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಪುರಸಭೆ ಆವರಣದಲ್ಲಿ ಭಾರತೀಯ ದಲಿತ ಪ್ಯಾಂಥರ್‌ ವತಿಯಿಂದ ಬುಧವಾರ ಧರಣಿ ನಡೆಯಿತು.

Advertisement

ಪಟ್ಟಣದ ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಯುಜಿಡಿ ಕಾಮಗಾರಿ ಅಪೂರ್ಣವಾಗಿದ್ದು, ಈ ಕುರಿತು ಉನ್ನತ ತನಿಖೆ ನಡೆಸಿ ತಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪುರಸಭೆಯ ಶೇ. 24.10 ಅನುದಾನ 2005ರಿಂದ 2020ರ ವರೆಗಿನ ಅನುದಾನ ಕುರಿತು ತನಿಖೆ ನಡೆಸಬೇಕು.

ಪೌರ ಕಾರ್ಮಿಕರಿಗೆ ಬಾಕಿ ಇರುವ ವೇತನ ಪಾವತಿ ಮಾಡಬೇಕು. ಇಂದಿರಾನಗರ ಬಡಾವಣೆಯಲ್ಲಿನ ರಾಮಚಂದ್ರ ಸಮುದಾಯ ಭವನ ಹಾಗೂ ಶೌಚಾಲಯ ರಿಪೇರಿ ಕುರಿತು ಕಳೆದ ಎರೆಡು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದು, ಗುತ್ತಿಗೆ ಪಡೆದವರ ಪರವಾನಗಿ ರದ್ದುಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸುಶೀಲಕುಮಾರ ಭೋಲಾ, ವಿಜಯಕುಮಾರ ಜಂಜೀರ, ರವಿಕಾಂತ, ಧನರಾಜ, ಸಿದ್ಧಾರ್ಥ ಸೇರಿದಂತೆ ಅನೇಕರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next