Advertisement
ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ತಾಲೂಕಾ ಘಟಕ ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ 82 ಸಾವಿರಕ್ಕಿಂತ ಅಧಿಕ ಶಿಕ್ಷಕರು ಬಿಎ, ಬಿಎಸ್ಸಿ, ಎಂಎ, ಎಂಸ್ಸಿ, ಬಿಎಡ್, ಎಂಎಡ್, ಪಿಎಚ್ಡಿ ಮುಂತಾದ ಪದವಿ ಪಡೆದ ಅನುಭವಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು ಈಗಿರುವ ಶಿಕ್ಷಕರನ್ನು ಪರಿಗಣಿಸದೆ ಹೋದರೆ ನಾವು ನೇಮಕವಾದ 1ರಿಂದ 5ನೇ ತರಗತಿಯನ್ನು ಮಾತ್ರ ಬೋಧಿಸಿ 6ರಿಂದ 8 ನೇ ತರಗತಿಯನ್ನು ಬಹಿಷ್ಕರಿಸಬೇಕಾಗುತ್ತೆದೆ ಎಂದು ಎಚ್ಚರಿಸಿದರು. ತಾಲೂಕಾಧ್ಯಕ್ಷ ಮಹಾಂತೇಶ ವಸ್ತ್ರದ ಮಾತನಾಡಿ, ಈಗಾಗಲೇ ಶಿಕ್ಷಣ ಇಲಾಖೆ ಮುಖ್ಯಸ್ಥರಿಗೆ ಮತ್ತು ಶಿಕ್ಷಣ ಸಚಿವರನ್ನು ಭೇಟಿ, ಉಪವಾಸ ಸತ್ಯಾಗ್ರಹ ನಡೆಸಿ ಸರಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಡಿಕೆ ಈಡೇರುವ ವರೆಗೆ ಶಿಕ್ಷಕರು ತರಗತಿಗಳನ್ನು ಬಹಿಷ್ಕರಿಸಿ ನಿರಂತರ ಧರಣಿ ಸತ್ಯಾಗ್ರಹ ಮುಂದುವರಿಸಬೇಕಾಗುತ್ತದೆ ಎಂದು ಹೇಳಿದರು. ಕೆ.ಕೆ. ಚಿಪ್ಪಾಡಿ, ವಿ.ಪಿ. ದಂಡಿಗೆದಾಸರ, ಲಿಂಗರಾಜ ಕಮತ, ಪ್ರದೀಪ ಶೆಟ್ಟಿ, ಎಲ್.ಎಂ. ಗಡ್ಡಿ ಮತ್ತಿತರು ಮಾತನಾಡಿದರು. ವೆಂಕಟೇಶ ಭಜಂತ್ರಿ, ವಿ.ಪಿ. ಬಡಿಗೇರ, ಗಿರಿಜಾ ಹಿರೇಮಠ, ಎಂ.ಬಿ. ಪವಾಡಶೆಟ್ಟರ, ಎನ್.ಆರ್. ಕಟ್ಟಿಮನಿ, ಎಂ.ಎನ್. ವಗ್ಗರ ಇನ್ನಿತರರಿದ್ದರು. Advertisement
ಶಿಕ್ಷಕರ ಮುಂಬಡ್ತಿ ಅನ್ಯಾಯ ಸರಕಾರಕ್ಕೆ ಶೋಭೆ ತರೋಲ್ಲ
12:03 PM Jun 03, 2019 | Suhan S |
Advertisement
Udayavani is now on Telegram. Click here to join our channel and stay updated with the latest news.