Advertisement

ಅಧಿಕಾರಿಗಳಿಂದ 13 ಜನರ ಮಾಹಿತಿ ಸಂಗ್ರಹ

05:59 PM Apr 04, 2020 | Suhan S |

ಸಿಂಧನೂರು: ದೆಹಲಿ ಧರ್ಮಸಭೆಗೆ ಹೋಗಿ ಬಂದಂತಹ ತಾಲೂಕಿನ ವಿವಿಧ ಗ್ರಾಮಗಳಲ್ಲಿನ 13 ಜನರನ್ನು ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

Advertisement

ತುರ್ವಿಹಾಳ, ಕಲ್ಮಂಗಿಯಲ್ಲಿ 2 ಜನ, ಗುಂಜಳ್ಳಿ ಹಾಗೂ ಗುಂಜಳ್ಳಿಕ್ಯಾಂಪ್‌ನಿಂದ 11 ಜನರು ದೆಹಲಿಯ ನಿಜಾಮುದ್ದೀನ್‌ ಧರ್ಮಸಭೆಗೆ ಹೋಗಿ ಬಂದಿರುವುದು ತಿಳಿದು ಬಂದಿದೆ. ಆದರೆ ಇವರೆಲ್ಲರೂ ಕಳೆದ ಒಂದೂವರೆ ತಿಂಗಳ ಹಿಂದೆ ಹೋಗಿ ಬಂದಿರುವುದಾಗಿ ಅಧಿ ಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದೇ ತರಹ ಹಂಚಿನಾಳಕ್ಯಾಂಪ್‌ಗೆ ಗುಜರಾತಿನಿಂದ ವ್ಯಕ್ತಿಯೋರ್ವನು ಬಂದು ಇಲ್ಲಿಯೇ ಎಗ್‌ರೈಸ್‌ ವ್ಯಾಪಾರ ಮಾಡುತ್ತಿದ್ದಾನೆ. ಇತನು ಗುಜರಾತಿನಲ್ಲಿ ನಡೆದ ಧರ್ಮಸಭೆಗೆ ಹೋಗಿ ಬಂದಿರುವುದಾಗಿ ಖಚಿತ ಮಾಹಿತಿ ನೀಡಿದ್ದಾನೆ. 13 ಜನರನ್ನು ಸೇರಿಸಿ ಇತನನ್ನು ಅಧಿಕಾರಿಗಳು ತನಿಖೆ ಕೈಗೊಂಡು ಹೋಂಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ವೈದ್ಯಾಧಿಕಾರಿಗಳು ಇವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ಕೋವಿಡ್ 19 ಮುಂಜಾಗ್ರತಾ ಕ್ರಮವಾಗಿ ತಾಲೂಕಿನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಹಿಂದೆ ತಾಲೂಕಿನ ವಿವಿಧ ಗ್ರಾಮಗಳಿಂದ ದೆಹಲಿಯ ನಿಜಾಮುದ್ದೀನ್‌ ಧರ್ಮಸಭೆಯಲ್ಲಿ 13 ಜನರು ಒಂದೂವರೆ ತಿಂಗಳ ಹಿಂದೆ ಹೋಗಿ ಬಂದಿರುವುದಾಗಿ ತಿಳಿದು ಬಂದಿದೆ. ಇನ್ನೂ ಗುಜರಾತಿನಿಂದ ಹಂಚಿನಾಳಕ್ಯಾಂಪ್‌ಗೆ ಬಬ್ಬ ವ್ಯಕ್ತಿ ಬಂದು ಇಲ್ಲಿಯೇ ಎಗ್‌ರೈಸ್‌ ವ್ಯಾಪಾರ ನಡೆಸುತ್ತಿರುವುದಾಗಿ ತಿಳಿದು ಬಂದಿದ್ದು, ಇವರೆಲ್ಲರನ್ನು ಹೋಂಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.  –ಮಂಜುನಾಥ ಭೋಗಾವತಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next