Advertisement

ಸೋಂಕು ಪೀಡಿತ ವಾರ್ಡ್‌ಗಳು ನಿವಾಸಿಗಳಿಗೆ ಹೋಮಿಯೋಪತಿ ಔಷಧಿ

06:23 PM May 13, 2020 | Suhan S |

ಮುಂಬಯಿ,ಮೇ 12: ಧಾರಾವಿ, ಮಾಹಿಮ್‌ ಮತ್ತು ಜಿ-ನಾರ್ತ್‌ನಂತಹ ವಾರ್ಡ್‌ಗಳಲ್ಲಿ ಕೋವಿಡ್ ವೈರಸ್‌ ಅನ್ನು ನಿಭಾಯಿಸಲು ಹೋಮಿಯೋಪತಿ ಔಷಧಿಯನ್ನು ವಿತರಿಸಲು ಬಿಎಂಸಿಯ ಸಾರ್ವಜನಿಕ ಆರೋಗ್ಯ ಇಲಾಖೆ ಅನುಮತಿ ನೀಡಿದೆ.

Advertisement

ವರ್ಸೋವ, ಜುಹು ಮತ್ತು ಅಂಧೇರಿಗಳನ್ನು ಒಳಗೊಂಡಿರುವ ಕೆ-ವೆಸ್ಟ್‌ ವಾರ್ಡ್‌ನ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದ್ದು ಈ ವಾರ್ಡ್‌ಗಳಲ್ಲಿರುವ 20 ಲಕ್ಷ ಜನರಿಗೆ ಖಾಸಗಿ ಸಮಿತಿಯ ಮೂಲಕ ಸಂಪರ್ಕತಡೆಯನ್ನು ಒಳಗೊಂಡಂತೆ ಉಚಿತವಾಗಿ ಔಷಧಿಯನ್ನು ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಖಾಸಗಿ ಸಮಿತಿಗೆ ಬರೆದ ಪತ್ರದಲ್ಲಿ, ಬಿಎಂಸಿಯ ಕಾರ್ಯನಿರ್ವಾಹಕ ಆರೋಗ್ಯ ಅಧಿಕಾರಿ ಪದ್ಮಜ ಕೇಸ್ಕರ್‌, ದೆಹಲಿಯ ಕೇಂದ್ರ ಆಯುಷ್‌ ಸಚಿವಾಲಯವು ತನ್ನ ಮಾರ್ಗಸೂಚಿಗಳಲ್ಲಿ ಆರ್ಸೆನಿಕಮ್‌ ಆಲ್ಬಮ್‌ 30 ಔಷಧವು ಕೋವಿಡ್ ವೈರಸ್‌ ಸಾಂಕ್ರಾಮಿಕ ರೋಗಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಉಪಯುಕ್ತವಾಗಿದೆ ಎಂದು ತಿಳಿಸಿದೆ.

ಔಷಧಿ ವಿತರಣೆಗೆ ಸಂಬಂಧಿಸಿದಂತೆ ನಾವು ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿದ್ದೇವೆ. ಸಮಿತಿಯು ಔಷಧಿಯನ್ನು ಲಭ್ಯವಾಗುವಂತೆ ಮಾಡಲಿದ್ದು ಅದರ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ. ಔಷಧಿಯನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂಬುದರ ಕುರಿತು ಬಿಎಂಸಿ ಜನರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದ್ದಾರೆ.

ಈ ಪತ್ರವನ್ನು ಜಿ-ನಾರ್ತ್‌ ಮತ್ತು ಕೆ-ವೆಸ್ಟ್‌ ವಾರ್ಡ್‌ಗಳ ಸಹಾಯಕ ಆಯುಕ್ತರಿಗೆ ಸಮನ್ವಯಕ್ಕಾಗಿ ಕಳುಹಿಸಲಾಗಿದೆ. ಆಯುಷ್‌ ತನ್ನ ಸಲಹೆಯಲ್ಲಿ, ಆರ್ಸೆನಿಕಮ್‌ ಆಲ್ಬಮ್‌ 30 ಅನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳವರೆಗೆ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿತ್ತು.ಆಯುಷ್‌ ಔಷಧಿ ಕೇವಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next