Advertisement

ಸೋಂಕಿತರು ಖಿನ್ನತೆಗೆ ಒಳಗಾಗಬೇಡಿ: ಡೀಸಿ

09:58 AM May 13, 2020 | Lakshmi GovindaRaj |

ಮಂಡ್ಯ: ಜನಸಾಮಾನ್ಯರು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವಿಸಿ ಕೊರೊನಾ ಹರಡದಂತೆ ತಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಆಯುಷ್‌  ಇಲಾಖೆಯಿಂದ ಪತ್ರಕರ್ತರಿಗೆ ಆಯುರ್ವೇದ ಔಷಧಗಳ ನ್ನು ವಿತರಿಸಿ ಮಾತನಾಡಿ, ನಾವು ಸೇವಿಸುವ ದೈನಂದಿನ ಆಹಾರದಲ್ಲಿ ಬಳಸುವ ಅರಿಶಿನ, ಶುಂಠಿ, ಕಾಳುಮೆಣಸಿನಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಇರುತ್ತದೆ.

ರೋಗ  ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸೇವಿಸಿ ಕೊರೊನಾದಂತಹ ರೋಗಗಳಿಂದ ದೂರ ಉಳಿಯಬಹುದು ಎಂದರು. ಕೊರೊನಾ ಸೋಂಕಿಗೆ ಒಳಗಾದವರು ಯಾರೂ ಮಾನಸಿಕ ಖನ್ನತೆಗೆ ಒಳಗಾಗಬಾರದು.

ಅದನ್ನು ಧೈರ್ಯದಿಂದ  ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಯುರ್ವೇದ ದಲ್ಲಿ ನೈಸರ್ಗಿಕವಾಗಿ ಬೆಳೆದ ಗಿಡಗಳು, ಫಲ-ಪುಷ್ಪ ಗಳಿಂದ ತಯಾರಿಸಿದ ಔಷಧವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು  ತಿಳಿಸಿದರು.

ಜಿಲ್ಲಾ ಆಯುಷ್‌ ವೈದ್ಯಾಧಿಕಾರಿ ಡಾ. ಪುಷ್ಪಾ ಮಾತನಾಡಿ, ಕೊರೊನಾ ಸೋಂಕು ಹರಡುವು ದನ್ನು ತಪ್ಪಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದರ ಜೊತೆಗೆ ನಮ್ಮಲ್ಲಿ ದೊರೆಯಬಹು ದಾದ ಆಯುರ್ವೇದ  ಔಷಧಗಳನ್ನು ಬಳಸಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳ ಬೇಕು ಎಂದು ಹೇಳಿದರು.

Advertisement

ಕಾರ್ಯಕರ್ತರಿಗೆ ಜಿಪಂ ಸಿಇಒ ಯಾಲಕ್ಕಿಗೌಡ, ಹಿರಿಯ ಪತ್ರಕರ್ತ ಕೆ.ಎನ್‌.ರವಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಮಂಜು ನಾಥ್‌, ಪ್ರಧಾನ ಕಾರ್ಯದರ್ಶಿ ಮೋಹನ್‌, ಉಪಾಧ್ಯಕ್ಷ ನವೀನ್‌, ಅನನ್ಯ ಹಾರ್ಟ್ಸ್ ಸಂಸ್ಥೆಯ ಅನುಪಮಾ, ವೈದ್ಯಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರ್‌, ಡಾ.ಲೋಕೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next