Advertisement

ಆಂಗ್ಲ ಮಾಧ್ಯಮಕ್ಕೆ ಅಪಸ್ವರ

01:50 AM Jun 28, 2019 | Team Udayavani |

ಬಾಗಲಕೋಟೆ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಪಸ್ವರ ಎತ್ತಿದ್ದಾರೆ.

Advertisement

ಬಾದಾಮಿ ತಾಲೂಕು ಆಲೂರ ಎಸ್‌.ಕೆ. ಗ್ರಾಮದಲ್ಲಿ ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯಲಾಗಿದೆ. ಎಷ್ಟು ಜನ ಶಿಕ್ಷಕರಿಗೆ ಇಂಗ್ಲಿಷ್‌ ಬರುತ್ತದೆ ಎಂಬುದು ನನ್ನ ಭಾವನೆ. ಶಿಕ್ಷಕರಿಗೆ ಮೊದಲು ಇಂಗ್ಲಿಷ್‌ ಬರಬೇಕು ಎಂದರು.

ಮತ್ತೆ ಕುಂಕುಮಕ್ಕೆ ಹೆದರಿದ ಸಿದ್ದು: ಕಳೆದ ಬಾರಿ ಜಿಲ್ಲೆಗೆ ಬಂದಿದ್ದ ವೇಳೆ ಕುಂಕುಮ ಹಚ್ಚಿಕೊಂಡವರು ಕಂಡರೆ ನನಗೆ ಭಯ ಎಂದು ಹೇಳಿದ್ದ ಸಿದ್ದರಾಮಯ್ಯ, ಗುರುವಾರ ಬಾದಾಮಿ ತಾಲೂಕು ಚಿಮ್ಮನಕಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ವೇಳೆ ಪೂಜಾರಿಯೊಬ್ಬರು ಕುಂಕುಮ ಹಚ್ಚಲು ಹೋದಾಗ ಕುಂಕುಮ ಹಚ್ಚಬೇಡ ಎಂದ ಪ್ರಸಂಗ ನಡೆಯಿತು.

ಬೆಂಬಲಿಗನಿಂದ ಶೂ ತೊಡಿಸಿಕೊಂಡ ಸಿದ್ದು
ಮಾಜಿ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಬೆಂಬಲಿಗರೊಬ್ಬರಿಂದ ಶೂ ತೊಡಗಿಸಿಕೊಂಡ ಪ್ರಸಂಗ ಗುರುವಾರ ಬಾದಾಮಿ ತಾಲೂಕಿನ ಕಾಕನೂರ ಗ್ರಾಮದಲ್ಲಿ ನಡೆಯಿತು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧ ವಿರುಪಾಕ್ಷಿ ಯಲ್ಲಪ್ಪ ಸಿಳ್ಳಿಕೇತರ ಅವರ ಮನೆಗೆ ಹೋಗಿ, ಯೋಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹೊರ ಬರುತ್ತಿದ್ದಂತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಹಾಂತೇಶ ಹಟ್ಟಿ, ಸಿದ್ದರಾಮಯ್ಯ ಅವರಿಗೆ ಶೂ ತೊಡಿಸಲು ಬಂದರು. ಆಗ ಏ ಇಲ್ಲಿ ಮೀಡಿಯಾದವರು ಇದ್ದಾರ ಬಿಡಪ್ಪ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next