Advertisement

ಕೆಜಿಎಫ್‌ನಲ್ಲಿ ಕೈಗಾರಿಕಾ ಹಬ್‌: ಜಗದೀಶ್‌ ಶೆಟ್ಟರ್‌

08:04 PM Mar 19, 2021 | Team Udayavani |

ಬೆಂಗಳೂರು: ಕೋಲಾರದ ಕೆಜಿಎಫ್‌ನಲ್ಲಿ ಶೀಘ್ರದಲ್ಲೇ ಕೈಗಾರಿಕಾ ಹಬ್‌ ಪ್ರಾರಂಭಿಸಲು ಸರಕಾರ ತೀರ್ಮಾನಿಸಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರು ವಿಧಾನಸಭೆಯಲ್ಲಿ ತಿಳಿಸಿದರು.

Advertisement

ಶಾಸಕಿ ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಜಿಎಫ್‌ ಸಮೀಪ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿ ಕೈಗಾರಿಕಾ ಹಬ್‌ ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಹೀಗಾಗಿ ಸರಕಾರ ಕ್ರಮ ಕೈಗೊಂಡಿದೆ ಎಂದರು.

ಚಿನ್ನದ ನಿಕ್ಷೇಪ ಸಮೀಕ್ಷೆ

ಕೆಜಿಎಫ್‌ನಲ್ಲಿ ಸ್ಥಗಿತಗೊಂಡಿರುವ ಚಿನ್ನದ ಗಣಿ ನಿಕ್ಷೇಪವನ್ನು ಪುನರಾರಂಭಿಸುವ ಬಗ್ಗೆ ಡ್ರೋಣ್‌ ಮೂಲಕ ಸಮೀಕ್ಷೆ ನಡೆಸುತ್ತಿದ್ದೇವೆ. ಈ ಪ್ರಕ್ರಿಯೆ ಎರಡು ಮೂರು ತಿಂಗಳಲ್ಲಿ ಮುಗಿಯಲಿದ್ದು, ಅನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಇದನ್ನೂ ಓದಿ:ಬಿಡುಗಡೆಗೊಂಡಿದೆ ದೇಸಿ ಆ್ಯಪ್ ಸ್ಟೋರ್ ‘ಮೊಬೈಲ್ ಸೇವಾ’..!

Advertisement

ಬಿಇಎಂಎಲ್‌ ಖಾಸಗೀಕರಣಕ್ಕೆ ವಿರೋಧ

ಕೆಜಿಎಫ್‌ನಲ್ಲಿರುವ ಬಿಇಎಂಎಲ್‌ ಸಂಸ್ಥೆ ಲಾಭದಲ್ಲಿದ್ದರೂ ಕೇಂದ್ರ ಸರಕಾರ ಖಾಸಗಿಗೆ ನೀಡಲು ಮುಂದಾಗಿದೆ. ರಾಜ್ಯಾದ್ಯಂತ 11,300 ಸಾವಿರ ಬಿಇಎಂಎಲ್‌ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಲಾಭದಲ್ಲಿದ್ದರೂ ಕೇಂದ್ರ ಸರಕಾರ ಇದನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ತಿಂಗಳಿಗೆ ನೂರಾರು ಕೋಟಿ ಹಾಗೂ ವರ್ಷಕ್ಕೆ ಸಾವಿರಾರು ಕೋಟಿ ರೂ. ಲಾಭ ಬರುತ್ತದೆ. ಇಲ್ಲಿರುವ ಬಂಡವಾಳವನ್ನು ಹಿಂದೆಗೆಯಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಚರ್ಚೆಗೆ ಆಗ್ರಹಿಸಿದರು. ಆದರೆ, ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ಸ್ಪೀಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next