Advertisement

ಮೊದಲ ಸುತ್ತು ದಾಟಿದ ಸಿಂಧು, ಶ್ರೀಕಾಂತ್‌

11:27 PM Jul 17, 2019 | Team Udayavani |

ಜಕಾರ್ತಾ: “ಇಂಡೋನೇಶ್ಯ ಓಪನ್‌ ಸೂಪರ್‌ 1000′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್‌ ಆಟಗಾರರಾದ ಪಿ.ವಿ. ಸಿಂಧು, ಕೆ. ಶ್ರೀಕಾಂತ್‌ ಮೊದಲ ಸುತ್ತಿನಲ್ಲಿ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಿ. ಸಾಯಿಪ್ರಣೀತ್‌ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ.

Advertisement

ಇದಕ್ಕೂ ಮುನ್ನಾ ಭಾರತದ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿ ರೆಡ್ಡಿ-ಚಿರಾಗ್‌ ಶೆಟ್ಟಿ, ಮಿಕ್ಸೆಡ್‌ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ-ಎನ್‌. ಸಿಕ್ಕಿ ರೆಡ್ಡಿ ಕೂಡ ಗೆಲುವು ಕಂಡಿದ್ದು, 2ನೇ ಸುತ್ತಿಗೆ ಏರಿದ್ದಾರೆ. ಆದರೆ ವನಿತಾ ಡಬಲ್ಸ್‌ ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಪರಾಭವಗೊಂಡಿದ್ದಾರೆ.

ಸಿಂಧು 3 ಗೇಮ್‌ ಹೋರಾಟ
ಪಿ.ವಿ. ಸಿಂಧು ಅವರ ಆರಂಭ ಅಮೋಘವಾಗೇನೂ ಇರಲಿಲ್ಲ. ಜಪಾನಿನ ಅಯಾ ಒಹೊರಿ ವಿರುದ್ಧ ಮೊದಲ ಗೇಮ್‌ ಕಳೆದುಕೊಂಡು ಮುಂದಿನೆರಡು ಗೇಮ್‌ಗಳಲ್ಲಿ ದಿಟ್ಟ ಪ್ರದರ್ಶನ ನೀಡಿ 59 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಸಿಂಧು ಗೆಲುವಿನ ಅಂತರ 11-21, 21-15, 21-15. ಸಿಂಧು ಅವರಿನ್ನು ಡೆನ್ಮಾರ್ಕ್‌ನ ಮಿಯಾ ಬ್ಲಿಕ್‌ಫೆಲ್ಟ್ ಅಥವಾ ಹಾಂಕಾಂಗ್‌ನ ಯಿಪ್‌ ಪುಯಿ ಇನ್‌ ಅವರನ್ನು ಎದುರಿಸಲಿದ್ದಾರೆ.

2 ವರ್ಷಗಳ ಹಿಂದೆ ಇಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದ ಕೆ. ಶ್ರೀಕಾಂತ್‌ ಜಪಾನಿನ ಕೆಂಟ ನಿಶಿಮೊಟೊ ಅವರನ್ನು ಕೇವಲ 38 ನಿಮಿಷಗಳಲ್ಲಿ 21-14, 21-13 ಅಂತರದಿಂದ ಹಿಮ್ಮೆಟ್ಟಿಸಿದರು. ಈ ವರ್ಷದ ಆರಂಭದಲ್ಲಿ ಇವರಿಬ್ಬರು ಜಕಾರ್ತಾದಲ್ಲೇ ಮೊದಲ ಸಲ ಎದುರಾಗಿದ್ದರು. ಆಗಲೂ ಶ್ರೀಕಾಂತ್‌ ನೇರ ಗೇಮ್‌ಗಳ ಜಯ ದಾಖಲಿಸಿದ್ದರು. ಶ್ರೀಕಾಂತ್‌ ಅವರಿನ್ನು ಫ್ರಾನ್ಸ್‌ನ ಬ್ರೈಸ್‌ ಲೆವರ್ಡೆಜ್‌ ಅಥವಾ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್‌ ಅಂಗುಸ್‌ ವಿರುದ್ಧ ಆಡಬೇಕಿದೆ.

ಭಾರತದ ಮತ್ತೂಬ್ಬ ಭರವಸೆಯ ಆಟಗಾರ ಬಿ. ಸಾಯಿ ಪ್ರಣೀತ್‌ ಹಾಂಕಾಂಗ್‌ನ ವೋಂಗ್‌ ವಿಂಗ್‌ ಕಿ ವಿನ್ಸೆಂಟ್‌ ವಿರುದ್ಧ 3 ಗೇಮ್‌ಗಳ ಕಾದಾಟ ನಡೆಸಿ ಶರಣಾದರು. ವಿನ್ಸೆಂಟ್‌ ಅವರ ಜಯದ ಅಂತರ 15-21, 21-13, 21-10. ಈ ಪಂದ್ಯ 55 ನಿಮಿಷಗಳ ತನಕ ಸಾಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next