Advertisement
ಈ ನಡುವೆ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ಸರ್ಕಾರ ಮುಂದಾಗಿರುವುದರಿಂದ ಅದು ಕಾರ್ಯಗತಗೊಂಡರೆ ಒಂದು ವರ್ಗದ “ಮತಬ್ಯಾಂಕ್’ ಕೈ ಪಾಲಾಗಬಹುದು ಎಂಬ ಆತಂಕ ಎರಡೂ ಪಕ್ಷಗಳದ್ದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
Related Articles
Advertisement
ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಸ್ತರಣೆಈ ಮಧ್ಯೆ, ಇಂದಿರಾ ಕ್ಯಾಂಟೀನ್ಗೆ ಪರ್ಯಾಯವಾಗಿ ಜೆಡಿಎಸ್ ವತಿಯಿಂದ ಬಸವನಗುಡಿಯಲ್ಲಿ ಆರಂಭಿಸಿರುವ ದೇವೇಗೌಡರ ಹೆಸರಿನ ನಮ್ಮ ಅಪ್ಪಾಜಿ ಕ್ಯಾಂಟೀನ್ ಅನ್ನು ಇತರೆಡೆಗೆ ವಿಸ್ತರಿಸಲು ಗಂಭೀರ ಚಿಂತನೆ ನಡೆದಿದೆ. ಶೀಘ್ರದಲ್ಲೇ ಮಹಾಲಕ್ಷ್ಮಿ ಲೇಔಟ್ನಲ್ಲಿ ಗೋಪಾಲಯ್ಯ ಅವರ ನೇತೃತ್ವದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ. ಈಗಾಗಲೇ ಜಾಗ ಗುರುತಿಸುತ್ತಿದ್ದು, ಮಲ್ಲೇಶ್ವರದಲ್ಲೂ ನಮ್ಮ ಅಪ್ಪಾಜಿ ಕ್ಯಾಂಟೀನ್ ತೆರೆಯಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ನಾಯಕರಿಗೆ ಖುದ್ದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು, ಸಾಧ್ಯವಾದರೆ ಕ್ಯಾಂಟೀನ್ ತೆರೆಯುವಂತೆ ಸಲಹೆ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಕೆಲವೆಡೆ ಕ್ಯಾಂಟೀನ್ ತೆರೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಸವನಗುಡಿಯಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ತೆರೆದಿರುವ ಶರವಣ ಅವರ ಬಳಿ ದೈನಂದಿನ ವೆಚ್ಚ, ಕಾರ್ಮಿಕರ ಅಗತ್ಯತೆ ಮತ್ತಿತರ ಮಾಹಿತಿಗಳನ್ನು ಕೆಲವು ಜೆಡಿಎಸ್ ನಾಯಕರು ಪಡೆದುಕೊಂಡಿದ್ದಾರೆ. ಒಟ್ಟಾರೆ, ವಿಧಾನಸಭೆ, ಲೋಕಸಭೆ, ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮ ವರ್ಗ ದೃಷ್ಟಿಯಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ಊಟ ಮತ್ತು ತಿಂಡಿ ನೀಡುವ ಕ್ಯಾಂಟೀನ್ಗಳ ಸ್ಥಾಪನೆ “ಸಮೂಹ ಸನ್ನಿಯಂತೆ’ ಆದರೂ ಆಶ್ಚರ್ಯವಿಲ್ಲ. “ಕ್ಯಾಂಟೀನ್’ ಭಾಗ್ಯ ಎಷ್ಟರ ಮಟ್ಟಿಗೆ ರಾಜಕೀಯ ಲಾಭ ತಂದುಕೊಡಲಿದೆ ಎಂಬುದನ್ನೂ ಕಾದು ನೋಡಬೇಇದೆ. ಇಂದಿರಾ ಕ್ಯಾಂಟೀನ್ಗೆ ನಾವು ಹೆದರಿಲ್ಲ. ಬದಲಿಗೆ ನಮ್ಮ ಅಪ್ಪಾಜಿ ಕ್ಯಾಂಟೀನ್ ವಿಸ್ತರಿಸುವ ಯೋಚನೆಯಿದೆ. ಇಂದಿರಾ ಕ್ಯಾಂಟೀನ್ ಯೋಜನೆ ನಮ್ಮ ಮತಬ್ಯಾಂಕ್ ಮೇಲೇನೂ ಪರಿಣಾಮ ಬೀರದು. ರಾಜ್ಯ ಸರ್ಕಾರ ಪೂರ್ವ ತಯಾರಿ ಇಲ್ಲದೆ ತರಾತುರಿಯಲ್ಲಿ ಜಾರಿ ಮಾಡಿರುವ ಕ್ಯಾಂಟೀನ್ ಯೋಜನೆ ಬಹಳ ದಿನ ನಡೆಯಲ್ಲ.
-ಟಿ.ಎ.ಶರವಣ, ರಾಜ್ಯ ಜೆಡಿಎಸ್ ವಕ್ತಾರ * ಎಸ್.ಲಕ್ಷ್ಮೀನಾರಾಯಣ