Advertisement

ಸರ್ಕಾರ ಯಾವ ಮಟ್ಟಕ್ಕೂ ಹೋಗಬಹುದು ಎಂದು ತೋರಿಸಿಕೊಟ್ಟಿದ್ದೇವೆ:ಶಾ 

02:10 PM Feb 26, 2019 | Team Udayavani |

ಘಾಜಿಪುರ್‌(ಉತ್ತರ ಪ್ರದೇಶ): ಸರ್ಜಿಕಲ್‌ ಸ್‌ಟ್ರೈಕ್‌ ಮತ್ತು ಉಗ್ರರ ಮೇಲಿನ ವಾಯುದಾಳಿ ಎನ್ನುವುದು ಭಾರತದ ಸೇನೆ ಮತ್ತು ಸರ್ಕಾರ ಯಾವ ಮಟ್ಟಕ್ಕೂ ಹೋಗಬಹುದು ಎನ್ನುವ ಸಂದೇಶವನ್ನು ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. 

Advertisement

ಮಂಗಳವಾರ ಬಿಜೆಪಿ ಬೃಹತ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು ಇಡೀ ದೇಶವೇ ಇಂತಹದ್ದೊಂದು ಕಾರ್ಯಾಚರಣೆಯನ್ನು ಬಯಸಿತ್ತು, ದೇಶಕ್ಕೆ ಇಂದು ಶುಭ ಸುದ್ದಿಯೇ ಸಿಕ್ಕಿದೆ. ಪುಲ್ವಾಮಾದಂತ ದಾಳಿ ನಡೆಸುವ ಮುನ್ನ ಹತ್ತು ಬಾರಿ ಯೋಚನೆ ಮಾಡಬೇಕಾಗಿದೆ ಎಂದರು. 

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆ ಇಂದು ಮಂಗಳವಾರ ನಸುಕಿನ ವೇಳೆ ಪಾಕಿಸ್ಥಾನದ ಬಾಲಕೋಟ್‌ ನಲ್ಲಿನ ಜೈಶ್‌ ತರಬೇತಿ ಶಿಬಿರಗಳ ಮೇಲೆ ಮಾರಕ ವೈಮಾನಿಕ ದಾಳಿ ನಡೆಸಿ 300 ಕ್ಕೂ ಹೆಚ್ಚು ಉಗ್ರರನ್ನು ನಾಶಗೈದಿದೆ. 

Advertisement

Udayavani is now on Telegram. Click here to join our channel and stay updated with the latest news.

Next