Advertisement

ಬರೋಬ್ಬರಿ 72 ವರ್ಷ ಹಳೆಯ ಕೇಸು ಕೊನೆಗೂ ಇತ್ಯರ್ಥ!

07:25 AM Jan 18, 2023 | Team Udayavani |

ಕೋಲ್ಕತ್ತಾ:ಬರೋಬ್ಬರಿ 72 ವರ್ಷಗಳಿಂದಲೂ ಇತ್ಯರ್ಥವಾಗದೇ ಉಳಿದಿದ್ದ ದೇಶದ ಅತ್ಯಂತ ಹಳೆಯ ಪ್ರಕರಣವೊಂದು ಈಗ ಇತ್ಯರ್ಥಗೊಂಡಿದೆ!

Advertisement

ಮತ್ತೊಂದು ವಿಶೇಷವೆಂದರೆ, ಸೋಮವಾರ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಅವರು ಜನಿಸಿದ್ದೇ ಈ ಕೇಸು ದಾಖಲಾದ 10 ವರ್ಷಗಳ ಬಳಿಕ!

ಹೌದು, ಅಚ್ಚರಿಯಾದರೂ ಇದು ಸತ್ಯ. 1951ರ ಜ.1ರಂದು ಬರ್ಹಾಂಪುರ ಬ್ಯಾಂಕ್‌ ಲಿ.ನ ವಿಸರ್ಜನೆ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲೂ ಈ ಅರ್ಜಿ ವಿಚಾರಣೆಗೆ ಬಂದಿತ್ತಾದರೂ, ಸಂಬಂಧಪಟ್ಟ ಯಾರೂ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಈ ಕುರಿತು ಪರಿಶೀಲಿಸಿದಾಗ, 2006ರಲ್ಲೇ ಪ್ರಕರಣವು ಮಧ್ಯಸ್ಥಿಕೆ ಮೂಲಕ ಇತ್ಯರ್ಥವಾಗಿದೆ ಎಂಬ ವಿಚಾರ ಗೊತ್ತಾಯಿತು.

ಹೀಗಾಗಿ, ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಅವರು, ಕೇಸು ಇತ್ಯರ್ಥಗೊಂಡಿರುವುದಾಗಿ ಪ್ರಕಟಿಸಿದರು.

Advertisement

1952ರಲ್ಲಿ ದಾಖಲಾಗಿರುವ ಒಟ್ಟು 5 ಪ್ರಕರಣಗಳು ಇನ್ನೂ ಇತ್ಯರ್ಥಕ್ಕೆ ಬಾಕಿಯಿವೆ. ಈ ಪೈಕಿ 2 ಪ್ರಕರಣಗಳು ಬಾಕಿ ಉಳಿದಿರುವುದು ಕಲ್ಕತ್ತಾ ಹೈಕೋರ್ಟ್‌ನಲ್ಲೇ. ಮತ್ತೊಂದು ಪ್ರಕರಣ ಮದ್ರಾಸ್‌ ಹೈಕೋರ್ಟ್‌ನಲ್ಲಿದ್ದರೆ, ಉಳಿದವು ಬಂಗಾಳದ ಮಾಲ್ಡಾದ ಸಿವಿಲ್‌ ಕೋರ್ಟ್‌ನಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next