Advertisement

ಭಯೋತ್ಪಾದನೆ ಎದುರಿಸುವ ಸಮರ್ಥ ನಾಯಕತ್ವ ಭಾರತಕ್ಕಿದೆ: ದೋವಾಲ್‌

06:22 AM Mar 19, 2019 | udayavani editorial |

ಗುರ್‌ಗಾಂವ್‌ : ಯಾವುದೇ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಅದಕ್ಕೆ ಕುಮ್ಮಕ್ಕು ನೀಡುವವರನ್ನು ಸದೆ ಬಡಿಯಲು ಭಾರತೀಯ ನಾಯಕತ್ವ ಅತ್ಯಂತ ಸಮರ್ಥವೂ ಬಲಿಷ್ಠವೂ ಇದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಾಲ್‌ ಹೇಳಿದ್ದಾರೆ.

Advertisement

ಇಲ್ಲಿ ನಡೆದ ಸಿಆರ್‌ಪಿಎಫ್ 80ನೇ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ಅವರು ಭಾರತ ತನ್ನ 40 ಸಿಆರ್‌ಪಿಎಫ್ ಯೋಧರನ್ನು ಕಳೆದುಕೊಂಡು ಫೆ.14ರ ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿಯನ್ನು ಎಂದೂ ಮರೆಯುವುದಿಲ್ಲ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ನಿಕಟ ವ್ಯಕ್ತಿಯಾಗಿದ್ದು ಬಾಲಾಕೋಟ್‌ ಮೇಲಿನ ಐಎಎಫ್ ವಾಯುದಾಳಿಯ ಹಿಂದಿನ ವ್ಯಕ್ತಿ ಎಂದು ತಿಳಿಯಲಾಗಿರುವ ದೋವಾಲ್‌ ಅವರು, “ಪುಲ್ವಾಮಾ ದಾಳಿಯಂತಹ ಯಾವುದೇ ಉಗ್ರ ದಾಳಿಯನ್ನು ಎದುರಿಸುವ ಸಮರ್ಥ ನಾಯಕತ್ವವನ್ನು ದೇಶವು ಹೊಂದಿದೆ ಎಂಬ ಭರವಸೆಯನ್ನು ನಾನು ನಿಮಗೆ ಈ ಸಂದರ್ಭದಲ್ಲಿ ಕೊಡುತ್ತೇನೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next