Advertisement

ಯುಕೆ ಪ್ರಧಾನಿಗೆ ಭಾರತೀಯರ ಪತ್ರ

12:46 AM Apr 09, 2021 | Team Udayavani |

ಲಂಡನ್‌: ಇತ್ತೀಚಿಗೆ ಜನಾಂಗೀಯ ನಿಂದನೆ ಕಾರಣದಿಂದಾಗಿ ಆಕ್ಸ್‌ಫ‌ರ್ಡ್‌ ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಕನ್ನಡತಿ ರಶ್ಮಿ ಸಾಮಂತ್‌ ರಾಜೀನಾಮೆ ಸಲ್ಲಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಯುನೈಟೆಡ್‌ ಕಿಂಗ್‌ಡಮ್‌ನ ಭಾರತೀಯ ಸಮೂಹ, ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ಪತ್ರ ಬರೆದಿದೆ.

Advertisement

ರಶ್ಮಿ ಸಾಮಂತ್‌ ಪ್ರಕರಣದಲ್ಲಿ ಅಂತರ್ಜಾಲದಲ್ಲಿ ಹರಿದಾಡಿದ ಜನಾಂಗೀಯ ದ್ವೇಷದ ಟೀಕೆಗಳಿಗೆ, ಕುಹಕಗಳಿಗೆ ಕಾರಣರಾದ ಆಕ್ಸ್‌ಫ‌ರ್ಡ್‌ ವಿವಿಯ ಸಿಬಂದಿ ಡಾ| ಅಭಿಜಿತ್‌ ಸರ್ಕಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿಯರನ್ನು ಸಮುದಾಯ ಆಗ್ರಹಿಸಿದೆ.

ರಶ್ಮಿ ಅವರ ರಾಜೀನಾಮೆ ನೀಡಿದ ಅನಂತರವೂ ಡಾ| ಅಭಿಜಿತ್‌ ಸರ್ಕಾರ್‌ ಅವರು  ರಶ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಸಂದೇಶಗಳನ್ನು ರವಾನಿಸಿದರು. ಈ ಮೂಲಕ ರಶ್ಮಿಯವರ ಮತ್ತು ಅವರ ಕುಟುಂಬದವರ ಹಿಂದೂ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಪತ್ರದಲ್ಲಿ ಆಪಾದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next