Advertisement

“ಮಲಿಬು’ವನ್ನು ಬಿಟ್ಟು ನಾನೆಲ್ಲೂ ಹೋಗಲ್ಲ!

07:43 PM Feb 27, 2022 | Team Udayavani |

“ನನ್ನ ಮಲಿಬುವನ್ನು ಬಿಟ್ಟು ನಾನು ಎಲ್ಲೂ ಬರಲ್ಲ. ಪ್ಲೀಸ್‌ ನನ್ನೊಂದಿಗೆ ಅವನನ್ನೂ ಕರೆದುಕೊಂಡು ಬರಲು ಅವಕಾಶ ಕೊಡಿ…’

Advertisement

ಹೀಗೆಂದು ಉಕ್ರೇನ್‌ನ ಬಂಕರ್‌ನಲ್ಲಿದ್ದುಕೊಂಡೇ ಮೊರೆಯಿಡುತ್ತಿರುವುದು ಖಾರ್ಕಿವ್‌ನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ರಿಷಬ್‌ ಕೌಶಿಕ್‌.

ಹೌದು.ತನ್ನ ಸಹಪಾಠಿಗಳೆಲ್ಲ ಏರ್‌ಇಂಡಿಯಾ ವಿಮಾನಗಳನ್ನು ಹತ್ತಿ ಭಾರತಕ್ಕೆ ಮರಳುತ್ತಿದ್ದರೆ, ಕೌಶಿಕ್‌ ಮಾತ್ರ ಬಂಕರ್‌ನಿಂದ ಕದಲುತ್ತಿಲ್ಲ.

ಅಂದ ಹಾಗೆ ಕೌಶಿಕ್‌ ಹೇಳುತ್ತಿರುವ “ಮಲಿಬು’ ಯಾರು ಗೊತ್ತಾ? ಅವನ ಪ್ರೀತಿಯ ಸಾಕು ನಾಯಿ!

ತನ್ನ ಪುಟ್ಟ ನಾಯಿಮರಿಯನ್ನು ತನ್ನೊಂದಿಗೆ ಭಾರತಕ್ಕೆ ಕರೆತರುವ ಸಲುವಾಗಿ, ಕೌಶಿಕ್‌ ಎಲ್ಲ ದಾಖಲೆ ಪತ್ರಗಳನ್ನೂ ಸಿದ್ಧಪಡಿಸುತ್ತಿದ್ದಾರಂತೆ. ಬಂಕರ್‌ನೊಳಗೆ ವಿಪರೀತ ಚಳಿಯಿರುವ ಕಾರಣ ನಾಯಿಮರಿಗೆ ಬಹಳ ಕಷ್ಟವಾಗುತ್ತಿದೆ.

Advertisement

ಇದನ್ನೂ ಓದಿ:ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ: ಪೋಷಕರಿಗೆ ಧೈರ್ಯ ತುಂಬಿದ ತಹಶೀಲ್ದಾರ್

ಹೀಗಾಗಿ, ಅವನನ್ನುಬೆಚ್ಚಗಿರಿಸಲು ನಾನು ಒಮ್ಮೊಮ್ಮೆ ಮೆಲ್ಲನೇ ಬಂಕರ್‌ನಿಂದ ಹೊರಬರುತ್ತಿದ್ದೇನೆ. ಸ್ಫೋಟದ ಸದ್ದಿನಿಂದ ಮಲಿಬು ಇಡೀ ದಿನ ಬೊಗಳುತ್ತಿರುತ್ತಾನೆ.

ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಮೊರೆಯಿಡುತ್ತಿದ್ದಾರೆ ಕೌಶಿಕ್‌.

Advertisement

Udayavani is now on Telegram. Click here to join our channel and stay updated with the latest news.

Next