Advertisement

ಕರ್ತಾರ್ಪುರ ಪ್ರೇಮ ಪ್ರಸಂಗ ; ಪಾಕ್ ಯುವಕನಿಗೆ ಮನಸೋತ ಸಿಖ್ ಯುವತಿ

09:27 AM Dec 04, 2019 | Team Udayavani |

ಲಾಹೋರ್‌: ಇತ್ತೀಚೆಗೆ ಲೋಕಾರ್ಪಣೆಗೊಂಡ ಕರ್ತಾರ್ಪುರ ಕಾರಿಡಾರ್‌ ಮೂಲಕ ಪಾಕಿಸ್ಥಾನದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ ಪುಣ್ಯಧಾಮಕ್ಕೆ ಭೇಟಿ ನೀಡಿದ್ದ ಭಾರತದ ಮಂಜಿತ್‌ ಕೌರ್‌ ಎಂಬ ಯುವತಿ, ಇದೇ ನೆಪದಲ್ಲಿ ತನಗೆ ಫೇಸ್‌ಬುಕ್‌ನಲ್ಲಿ ಪರಿಚಿತವಾಗಿದ್ದ ಯುವಕನ ಜತೆಗೆ ಪಾಕಿಸ್ಥಾನಕ್ಕೆ ಓಡಿ ಹೋಗುವ ವಿಫ‌ಲ ಯತ್ನ ಮಾಡಿದ್ದಾಳೆ.

Advertisement

ಪಾಕ್‌ನ ಫೈಸಲಾಬಾದ್‌ ನಗರದ ನಿವಾಸಿಯಾದ ಆ ಯುವಕ, ಗುರುದ್ವಾರಕ್ಕೆ ಬಂದಿದ್ದು, ಆತನನ್ನು ಅಲ್ಲಿ ಸಂಧಿಸಿದ ತರುವಾಯ ಆತನ ಜತೆಗೇ ಆತನ ಮನೆಗೆ ಓಡಿ ಹೋಗಲು ಯತ್ನಿಸಿದ್ದಳು. ಆದರೆ, ವೀಸಾ ರಹಿತವಾಗಿ ಪಾಕ್‌ ಪ್ರವೇಶಿಸಲು ಬಂದ ಆಕೆಯನ್ನು ಅಧಿಕಾರಿಗಳು ತಡೆದಿದ್ದಾರೆ. ವಿಚಾರಣೆಯ ಅನಂತರ ಯುವತಿಯನ್ನು ಹಿಂದಕ್ಕೆ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next