Advertisement

ಭಾರತೀಯ ವಿದ್ಯಾರ್ಥಿ ಸಾವು

08:25 AM Dec 15, 2018 | Karthik A |

ದುಬಾೖ: ಭಾರತೀಯ ಮೂಲದ ಪ್ರಸಿದ್ಧ ಗಿಟಾರ್‌ ಕಲಾವಿದರೊಬ್ಬರ ಮೃತದೇಹ ಅವರ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾಗ್ಗಿ ಎಂದೇ ಖ್ಯಾತನಾಗಿದ್ದ ಗಿಟಾರಿಸ್ಟ್‌ ಹಿಮಾಂಶು ಶರ್ಮ (22) ದುಬಾೖನ ಮಣಿಪಾಲ್‌ ಅಕಾಡೆಮಿ ಆಫ್ಹೈ ಯರ್‌ ಎಜುಕೇಷನ್‌ನಲ್ಲಿ 5ನೇ ವರ್ಷದ ಆರ್ಕಿಟೆಕ್ಚರ್‌ ವ್ಯಾಸಂಗ ಮಾಡುತ್ತಿದ್ದರು. ತಮ್ಮ ಪ್ರತಿಭೆಯಿಂದಾಗಿ ದುಬೈನ ಬಹುತೇಕ ಕಾಲೇಜುಗಳಲ್ಲಿ ಇವರು ಹೆಸರುವಾಸಿ ಆಗಿದ್ದರು. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಸದಾ ಲವಲವಿಕೆಯಿಂದಿರುತ್ತಿದ್ದ ಹಿಮಾಂಶು ಸಾವಿನ ಸುದ್ದಿ ಕೇಳಿ ಇಡೀ ಕಾಲೇಜಿಗೆ ಸಿಡಿಲು ಬಡಿದಂತಾಗಿದೆ ಎಂದು ಸಿಬ್ಬಂದಿ ವರ್ಗ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next