Advertisement

ಭಾರತ ಮೂಲದ ಪತ್ರಕರ್ತ ಗೊವೇಂದರ್‌ಗೆ 2019ರ ವಿ ಕೆ ಕೃಷ್ಣ ಮೆನನ್‌ ಪ್ರಶಸ್ತಿ

08:53 AM May 07, 2019 | Sathish malya |

ಲಂಡನ್‌ : ದಕ್ಷಿಣ ಆಫ್ರಿಕದಲ್ಲಿನ ಭಾರತೀಯ ಮೂಲದ ಪತ್ರಕರ್ತ ಜಿ ಡಿ ‘ರಾಬರ್ಟ್‌’ ಗೊವೇಂದರ್‌ ಅವರಿಗೆ ಬ್ರಿಟನ್‌ ನಲ್ಲಿ 2019ರ ವಿ ಕೆ ಕೃಷ್ಣ ಮೆನನ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಗೊವೇಂದರ್‌ ಅವರು ನಿರ್ವಸಾಹತೀಕೃತ ಪತ್ರಿಕೋದ್ಯಮದ ಹರಿಕಾರರಾಗಿ ನೀಡಿರುವ ಅದ್ಭುತ ಕಾಣಿಕೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಸಂದಿದೆ.

Advertisement

ಭಾರತೀಯ ರಾಯಭಾರಿ ಮತ್ತು ರಾಜಕಾರಣಿ ವಿ ಕೆ ಕೃಷ್ಣ ಮೆನನ್‌ ಅವರ 123ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕ ಸಂಜಾತ ಗೊವೇಂದರ್‌ ಅವರಿಗೆ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ.

ಪತ್ರಕರ್ತನಾಗಿ 60 ದಶಕಗಳ ಸುದೀರ್ಘ‌ ಸೇವೆಗೈದಿರುವ ಗೊವೇಂದರ್‌ ಅವರು ಅಭಿಯಾನ-ಪತ್ರಕರ್ತನಾಗಿ ಪ್ರತಿಷ್ಠಿತರಾಗಿದ್ದರು. ದಕ್ಷಿಣ ಆಫ್ರಿಕದ ಬಿಳಿಯರು ಮಾತ್ರವೇ ಇರುವ ಕ್ರೀಡಾ ತಂಡಗಳಿಗೆ ಅಂತಾರಾಷ್ಟ್ರೀಯ ಬಹಿಷ್ಕಾರ ಹಾಕಬೇಕೆಂದು ಕರೆ ನೀಡಿದ್ದ ಮೊದಲ ಪತ್ರಕರ್ತ ಅವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next