Advertisement

ದುಬೈ ಕಾರು ಅಪಘಾತ: ಕೇರಳದ ವೈದ್ಯ ಸಾವು

09:48 AM Nov 29, 2019 | Team Udayavani |

ದುಬೈ: ದುಬೈಯಲ್ಲಿ ನಡೆದ ಅಪಘಾತವೊಂದರಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ಬಲಿಯಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ..

Advertisement

ದುಬೈನ ಅಲ್ ಮುಸಲ್ಲಾ ಮೆಡಿಕಲ್ ಸೆಂಟರ್ನಲ್ಲಿ 2 ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ಡಾ| ಜಾನ್ ಮಾರ್ಷಲ್ ಸ್ಕಿನ್ನರ್ (60) ಈ ದುರ್ಘಟನೆಯಲ್ಲಿ ಬಲಿಯಾದವರು.

ಕಾರು ನಿಯಂತ್ರಣ ಕಳೆದುಕೊಂಡು ಉರುಳಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಕಾರಿನಿಂದ ಹೊರಬರಲಾಗದೇ ಸ್ಕಿನ್ನರ್ ಅವರು ಮೃತಪಟ್ಟಿದ್ದಾರೆ ಎಂದು ದುಬೈ ಪೊಲೀಸ್ ವರದಿ ಹೇಳಿದೆ.

ಡಾ| ಜಾನ್ ಮಾರ್ಷಲ್ ಸ್ಕಿನ್ನರ್ ಅವರ ಪತ್ನಿ ಡಾ| ಸಿಸ್ಸಿ ಮಾರ್ಷಲ್ ಅವರು ತನ್ನ ಪತಿ ಮನೆಗೆ ಬಾರದಿರುವುದನ್ನು ಮನಗಂಡು ಪತಿಯ ಸಹೋದ್ಯೋಗಿಗಳಲ್ಲಿ ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next