Advertisement
ಶ್ರೀ ವಿಶ್ವಕರ್ಮಾನ್ವಯ ಪ್ರದೀಪಿಕಾ ಗ್ರಂಥ ಪುನರ್ ಮುದ್ರಣಾ ಸಮಿತಿ ವತಿಯಿಂದ ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಶ್ರೀ ವಿಶ್ವಕರ್ಮಾನ್ವಯ ಪ್ರದೀಪಿಕಾ (ಪರಿಷ್ಕೃತ ದೀಪಿಕೆಯೊಂದಿಗೆ) ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಾರತದ ಪರಂಪರೆ, ಜೀವನ ಪದ್ಧತಿ ಉತ್ತಮವಾಗಿದೆ. 64 ವಿದ್ಯೆಗಳಲ್ಲಿ ಶಿಲ್ಪ ಶಾಸ್ತ್ರಕ್ಕೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಅರಿವು ಇಲ್ಲದವರಿಗೆ ವರ್ತಮಾನ, ಭವಿಷ್ಯತ್ ಇರುವುದಿಲ್ಲ ಎಂದು ಹೇಳಿದರು.
ಗ್ರಂಥ ಪುನರ್ ಮುದ್ರಣ ಸಮಿತಿ ಗೌರವಾಧ್ಯಕ್ಷ ವಿದ್ವಾನ್ ತಾಡಿಚರ್ಲ ವೀರ ರಾಘವ ಶರ್ಮಾ ಅಧ್ಯಕ್ಷತೆ ವಹಿಸಿದ್ದರು.
ವಿದ್ವಾಂಸ ರಾಘವ ನಂಬಿಯಾರ್, ವಿದ್ವಾನ್ ಚಂದ್ರಕಾಂತ್ ಶರ್ಮಾ ಹೆಬ್ರಿ, ವಿದ್ವಾನ್ ಚಂದ್ರೇಶ್ ಶರ್ಮಾ ಬೆಂಗಳೂರು, ಗ್ರಂಥ ಸಂಪಾದಕ ಡಾ| ಜಿ. ಜ್ಞಾನಾನಂದ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಕೆ. ಹರೀಶ ಆಚಾರ್ಯ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇಗುಲದ ಆಡಳಿತ ಮೊಕ್ತೇಸರ ಮಂಜುನಾಥ ಆಚಾರ್ಯ ಬಡಾಕರೆ, ಕಾಪು ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಶೇಖರ್ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್. ಸೀತಾರಾಮ ಆಚಾರ್ಯ, ಕುಂಜಿಬೆಟ್ಟು ಆರ್ವಿಎಸ್ಎಸ್ ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ, ಬಿ.ಎ. ಆಚಾರ್ಯ ಮಣಿಪಾಲ ಅವರು ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಪಿ. ವಾದಿರಾಜ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ಹಿರಿಯಡಕ ಪ್ರಸ್ತಾವನೆಗೈದರು. ಪ್ರಕಾಶ್ ಪುರೋಹಿತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿತ್ಯಾನಂದ ಎಸ್. ಆಚಾರ್ಯ ವಂದಿಸಿದರು.
Related Articles
ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನವಿತ್ತು, ಶಾಸ್ತ್ರ ಸಮೃದ್ಧವಾದ ಗ್ರಂಥಗಳು ಸಮಾಜಕ್ಕೆ ದೊಡ್ಡ ಸಂಪತ್ತಾಗಿದೆ. ಸಂಸ್ಕೃತದಲ್ಲಿರುವಂತಹ ಗ್ರಂಥಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರ ಮಾಡಿದರೆ ಜನಸಾಮಾನ್ಯರಿಗೂ ಅದರ ಒಳಗಿರುವ ಸಾರವನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.
Advertisement
ಬೇಧ-ಭಾವ ಬೇಡಪೇಜಾವರ ಶ್ರೀಗಳು ನಡೆಸಿರುವ ಈದ್ ಉಪಾಹಾರ ಕೂಟದ ಬಗ್ಗೆ ಸಮಾಜದಲ್ಲಿ ಅನಗತ್ಯವಾದ ಚರ್ಚೆಯಾಗುತ್ತಿದೆ. ಭಾರತದಲ್ಲಿರುವ ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು ಹೊರಗಿನವರೇ? ಪರಂಪರಾಗತ ಇತಿಹಾಸವನ್ನು ತಿಳಿದುಕೊಂಡರೆ ಎಲ್ಲವೂ, ಎಲ್ಲರಿಗೂ ಅರ್ಥವಾಗುತ್ತದೆ. ಬೇಧ-ಭಾವ ಸಲ್ಲದು ಎಂದು ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರು ಹೇಳಿದರು.