Advertisement

ಢಾಕಾ : 4.74 ಕೋಟಿ ರೂ. ಚಿನ್ನ ವಶ; ಭಾರತೀಯ ಪ್ರಜೆ ಸೆರೆ

04:57 PM Aug 09, 2018 | udayavani editorial |

ಢಾಕಾ : ಸುಮಾರು 4.7 ಕೋಟಿ ರೂ. ಮೌಲ್ಯದ ಚಿನ್ನದ ಬಾರ್‌ ಗಳನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ  ಅರ್ಷದ್‌ ಅಯಾಜ್‌ ಅಹಮದ್‌ ಎಂಬ ಭಾರತೀಯ ಪ್ರಜೆಯನ್ನು ಬಾಂಗ್ಲಾದೇಶದ ಕಸ್ಟಮ್ಸ್‌ ಅಧಿಕಾರಿಗಳು ಇಲ್ಲಿನ ಹಜರತ್‌ ಶಾಹ್‌ಜಲಾಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರೆಂದು ಮಾಧ್ಯಮ ವರದಿಗಳು ತಿಳಿಸಿವೆ. 

Advertisement

ಆರೋಪಿ ಅರ್ಷದ್‌ ಥಾಯ್‌ ಏರ್‌ ಲೈನ್ಸ್‌ ವಿಮಾನದ ಮೂಲಕ ಥಾಯ್ಲಂಡ್‌ನಿಂದ ಇಲ್ಲಿಗೆ ಬಂದಿದ್ದ. ಖಚಿತ ಮಾಹಿತಿಯ ಪ್ರಕಾರ ಆತನನ್ನು ವಶಕ್ಕೆ ತೆಗೆದುಕೊಂಡ ಕಸ್ಟಮ್ಸ್‌ ಅಧಿಕಾರಿಗಳು ಆತನಿಂದ 22 ಚಿನ್ನದ ಬಾರ್‌ ಗಳನ್ನು ವಶಪಡಿಸಿಕೊಂಡರು.  

Advertisement

Udayavani is now on Telegram. Click here to join our channel and stay updated with the latest news.

Next