Advertisement

ಕೋವಿಡ್ 19 ವೈರಸ್ ಸಂಹಾರಕ್ಕೆ ಸೇನೆಯ ಆಪರೇಷನ್‌ ನಮಸ್ತೆ

10:38 PM Mar 28, 2020 | Hari Prasad |

ಜಗತ್ತನ್ನೆಲ್ಲ ದಿಗ್ಭ್ರಮೆಗೊಳಿಸಿ, ಭಾರತವನ್ನೂ ರಣರಂಗ ಮಾಡಿಕೊಂಡ ಕೋವಿಡ್ 19 ವೈರಸ್ ವಿರುದ್ಧ ಭಾರತೀಯ ಸೇನೆ ಸಮರ ಸಾರಿದೆ. ಇದಕ್ಕೆ ‘ಆಪರೇಷನ್‌ ನಮಸ್ತೆ’ ಎನ್ನುವ ಹೆಸರಿಟ್ಟಿದ್ದು, ಕೋವಿಡ್ 19 ವೈರಸ್ ನಿಂದ ಸೈನಿಕರನ್ನು ರಕ್ಷಿಸಿಕೊಳ್ಳಲು ದೇಶಾದ್ಯಂತ 8 ಸುಸಜ್ಜಿತ ಕ್ವಾರಂಟೈನ್‌ಗಳನ್ನು ತೆರೆದಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ನವರಾಣೆ, ‘ದೇಶವಾಸಿಗಳ ರಕ್ಷಣೆ ಹೇಗೆ ನಮಗೆ ಮುಖ್ಯವೋ, ಹಾಗೇ ನಮ್ಮನ್ನು ನಾವು ರಕ್ಷಿಸಿಕೊಳ್ಳಲೂ ಹಲವು ಕ್ರಮ ಜಾರಿಮಾಡಿದ್ದೇವೆ. ಗಡಿ ನಿಯಂತ್ರಣಾ ರೇಖೆಯಲ್ಲಿರುವ ಯೋಧರ ಬಗ್ಗೆ ಅವರ ಕುಟುಂಬಗಳು ಚಿಂತಿತರಾಗಬೇಕಿಲ್ಲ.

ಅವರ ಆರೋಗ್ಯದ ಬಗ್ಗೆ ಸೇನೆ ಅಗತ್ಯ ನಿಗಾ ವಹಿಸಿದೆ. ಸೈನಿಕರಿಗೆ ಆರೋಗ್ಯ ಜಾಗೃತಿ ನೀಡಲಾಗುತ್ತಿದೆ. ಆಸ್ಪತ್ರೆ ಮತ್ತು ಲ್ಯಾಬ್‌ಗಳ ಸೌಲಭ್ಯ ಹೆಚಿಸಲಾಗಿದೆ.’ ಎಂದಿದ್ದಾರೆ. ಸೇನಾ ತುಕಡಿಗಳು ಹಿಂತಿರುಗಿದಾಗ ಕಡ್ಡಾಯ ಸ್ಕ್ರೀನಿಂಗ್‌ ನಡೆಸ ಲಾಗುತ್ತಿದೆ.

ಕ್ಯಾಂಪ್‌ಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದ್ದು, ಪ್ರತಿ ಬೆಡ್‌ಗಳಿಗೂ ಸಾಕಷ್ಟು ಅಂತರ ಬಿಡಲಾಗಿದೆ. ಅಲ್ಲಲ್ಲಿ ಹ್ಯಾಂಡ್‌ ವಾಷಿಂಗ್‌ ಪಾಯಿಂಟ್‌ಗಳನ್ನೂ ತೆರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next