Advertisement

ಮತ್ತೆ ಕಳ್ಳಾಟ; ಭಾರತೀಯ ಯೋಧರ ದಾಳಿಗೆ 7 ಪಾಕ್ ಸೈನಿಕರು ಬಲಿ

03:26 PM Jan 15, 2018 | Team Udayavani |

ಜಮ್ಮು: ಜಮ್ಮು ಕಾಶ್ಮೀರದ ಗಡಿಭಾಗದ ಉರಿ ಸೆಕ್ಟರ್ ಸಮೀಪ ನಾಲ್ಕು ಮಂದಿ ಜೆಇಎಂ ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಸೋಮವಾರ ಜಮ್ಮು ಕಾಶ್ಮೀರದ ಪೂಂಜ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ನಡೆಸಿದ ಪ್ರತಿದಾಳಿಗೆ ಏಳು ಮಂದಿ ಪಾಕ್ ಸೈನಿಕರು ಬಲಿಯಾಗಿರುವ ಘಟನೆ ನಡೆದಿದೆ.

Advertisement

ಏತನ್ಮಧ್ಯೆ ಭಾರತೀಯ ಸೇನಾಪಡೆ ದಾಳಿಗೆ ಕೇವಲ ನಾಲ್ವರು ಸೈನಿಕರು ಮಾತ್ರ ಸಾವನ್ನಪ್ಪಿದ್ದಾರೆ, ಏಳು ಮಂದಿ ಅಲ್ಲ ಎಂದು ಪಾಕ್ ಸರ್ಕಾರ ಸ್ಪಷ್ಟನೆ ನೀಡಿದೆ.

ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದೌಲಾಂಜಾ ಗ್ರಾಮದ ಉರಿಯಲ್ಲಿ ಗಡಿ ನುಸುಳಿ ಆತ್ಮಾಹುತಿ ದಾಳಿಗೆ ಯತ್ನಿಸಿದ್ದ ನಾಲ್ವರು ಜೈಷ್ ಎ ಮುಹಮ್ಮದ್ ಉಗ್ರಗಾಮಿ ಸಂಘಟನೆಯ ನಾಲ್ವರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು.

ಭಾರತೀಯ ಸೇನೆಯ 70ನೇ ದಿನಾಚರಣೆ ಅಂಗವಾಗಿ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಪಾಕಿಸ್ತಾನ ಮತ್ತೆ, ಮತ್ತೆ ಭಾರತದೊಳಕ್ಕೆ ಉಗ್ರರನ್ನು ನುಸುಳಿಸುವ ಕೆಲಸ ಮುಂದುವರಿಸಿದೆ. ಆದರೆ ಅದನ್ನು ನಮ್ಮ(ಭಾರತ) ಸೇನೆ ತಕ್ಕ ಕಾರ್ಯಾಚರಣೆ ಮೂಲಕ ವಿಫಲಗೊಳಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next