Advertisement

ಹಿಮಪಾತದಲ್ಲಿ ಸಿಲುಕಿದ ಯೋಧ; ನೂರಾರು ಸೈನಿಕರು, ಶ್ವಾನಪಡೆ, ಹೆಲಿಕಾಪ್ಟರ್ ಮೂಲಕ ತೀವ್ರ ಶೋಧ

09:18 AM Apr 12, 2020 | Nagendra Trasi |

ಗ್ಯಾಂಗ್ಟೋಕ್: ಸಿಕ್ಕಿಂನಲ್ಲಿ ಹಿಮದಿಂದ ಆವೃತ್ತವಾಗಿರುವ ಅತೀ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಹಿಮಬಂಡೆ ಕುಸಿತದಿಂದಾಗಿ ಸಿಲುಕಿಕೊಂಡಿರುವ ಯೋಧರ ಪತ್ತೆಹಚ್ಚುವಿಕೆಗಾಗಿ ಭಾರತೀಯ ಸೇನೆ ಭಾರೀ ಪ್ರಮಾಣದ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

Advertisement

ಸಿಕ್ಕಿಂನ ಅತೀ ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧ, ಲ್ಯಾನ್ಸ್ ನಾಯಕ್ ಸಂಜೀವ ರೆಡ್ಡಿ ಹಿಮಪಾತದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾ ಮೂಲಗಳು ಹೇಳಿವೆ.

ಈ ಘಟನೆ ನಡೆದಿರುವುದು ಏಪ್ರಿಲ್ 6ರಂದು. ಯೋಧ ರೆಡ್ಡಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೆಎಸ್ ಪಾಳ್ಯದ ನಿವಾಸಿಯಾಗಿದ್ದಾರೆ. ಸೇನೆಯ ಪ್ರಕಾರ, ಯೋಧ ರೆಡ್ಡಿ ಪತ್ತೆ ಕಾರ್ಯಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

250 ಯೋಧರು, ಹೆಲಿಕಾಪ್ಟರ್ ಗಳು, ಶ್ವಾನಪಡೆ, ಹಿಮಪಾತ ರಕ್ಷಣಾ ಶ್ವಾನ ಪಡೆ ಹಾಗೂ ಇನ್ನಿತರ ಉಪಕರಣಗಳೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next