Advertisement

ಕದನ ವಿರಾಮ ಉಲ್ಲಂಘನೆ; ಭಾರತೀಯ ಸೇನಾಪಡೆ ದಾಳಿಗೆ 5 ಪಾಕ್ ಸೈನಿಕರು ಬಲಿ

07:10 PM Jun 01, 2017 | Team Udayavani |

ಶ್ರೀನಗರ್:ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ಹಾಗೂ ಪೂಂಚ್ ನ ಕೃಷ್ಣ ಘಾಟಿ ಸೆಕ್ಟರ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನಿ ಪಡೆಯ ವಿರುದ್ಧ ಗುರುವಾರ ಭಾರತೀಯ ಸೇನಾ ಪಡೆ ನಡೆಸಿದ್ದ ಪ್ರತಿ ದಾಳಿಗೆ 5 ಪಾಕ್ ಸೈನಿಕರು ಬಲಿಯಾಗಿದ್ದಾರೆ.

Advertisement

ಭಾರತದ ಗಡಿಯತ್ತ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆ 5 ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ್ದು, ಆರು ಮಂದಿ ಸೈನಿಕರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಪಡೆ ಮೋರ್ಟಾರ್ಸ್ ದಾಳಿ ನಡೆಸಿತ್ತು. ಮೇ 26ರಂದು ಕಾಶ್ಮೀರದ ಉರಿ ಸೆಕ್ಟರ್ ನ ಗಡಿಭಾಗದಲ್ಲಿ ಪಾಕ್ ಭದ್ರತಾ ಪಡೆಯ ನೆರವಿನಿಂದ ನುಸುಳಲು ಯತ್ನಿಸಿದ್ದ ಇಬ್ಬರನ್ನು ಭಾರತೀಯ ಸೇನಾ ಪಡೆ ಹತ್ಯೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next