Advertisement

ಸೇನೆಯ ಭಾರೀ ಕಾರ್ಯಾಚರಣೆ: ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

08:56 AM May 27, 2017 | Team Udayavani |

ಶ್ರೀನಗರ: ಸೇನಾ ಪಡೆ ರಾಮ್‌ ಪುರ್‌ ಸೆಕ್ಟರ್‌ನಲ್ಲಿ  ಶನಿವಾರ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ  ಗಡಿ ನುಸುಳುತ್ತಿದ್ದ ಕನಿಷ್ಠ ನಾಲ್ವರು ಉಗ್ರರನ್ನು ಹತ್ಯೆಗೈದಿವೆ. ಇನ್ನೂ ಕೆಲ ಉಗ್ರರು ಇರುವ ಹಿನ್ನಲೆಯಲ್ಲಿ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ. 

Advertisement

ಇದೇ ವೇಳೆ ಜಮ್ಮುವಿನ ಸೈಮು ತ್ರಾಲ್‌ ಪ್ರದೇಶದಲ್ಲಿ ಉಗ್ರರ ಅಡಗು ತಾಣದ ಮೇಲೆ ಸೇನಾ ಪಡೆ ದಾಳಿ ನಡೆಸಿದ್ದು ಗುಂಡಿನ ಚಕಮಕಿ ನಡೆಯುತ್ತಿದೆ. 

ಶುಕ್ರವಾರ ಉರಿ ಸೆಕ್ಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿತ್ತು. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next