Advertisement

ಆಸೀಸ್‌ ವಿರುದ್ಧ ಏಕದಿನ ಪಂದ್ಯ;ಭಾರತಕ್ಕೆ ಭಾರಿ ಆರಂಭಿಕ ಆಘಾತ 

02:39 PM Sep 17, 2017 | Team Udayavani |

ಚೆನ್ನೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ  5 ಏಕದಿನ ಪಂದ್ಯಗಳ ಸರಣಿಯ ಭಾನುವಾರ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ  ಆತಿಥೇಯ ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಭಾರಿ ಆರಂಭಿಕ ಆಘಾತಕ್ಕೆ ಸಿಲುಕಿತು. 

Advertisement

11 ರನ್‌ ಆಗುವಷ್ಟರಲ್ಲಿ ಅಜಿಂಕ್ಯ ರೆಹಾನೆ ಔಟಾದರು. 5 ರನ್‌ಗಳಿಸಿದ್ದ ಅವರನ್ನು ಕೌಲ್ಟರ್‌ ನೀಲ್‌ ಪೆವಿಲಿಯನ್‌ಗೆ ಕಳುಹಿಸಿದರು. ವಿರಾಟ್‌ ಕೊಹ್ಲಿ ಕ್ರೀಸ್‌ಗಿಳಿದ ಕೂಡಲೇ ನಿರ್ಗಮಿಸಿ ಭಾರಿ ನಿರಾಶರಾದರು. ಶೂನ್ಯಕ್ಕೆ ನಿರ್ಗಮಿಸಿದರೆ , ಬಳಿಕ ಬಂದ ಮನೀಷ್‌ ಪಾಂಡೆಯೂ ಶೂನ್ಯಕ್ಕೆ ನಿರ್ಗಮಿಸಿದರು. ಮೂರು ವಿಕೆಟ್‌ಗಳನ್ನು ನೀಲ್‌ ಪಡೆದಿದ್ದಾರೆ.28 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಟೊಯ್ನೀಸ್‌ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. 40 ರನ್‌ ಗಳಿಸಿದ್ದ ಕೇದಾರ್‌ ಜಾಧವ್‌ ಕ್ಯಾಚಿತ್ತು ನಿರ್ಗಮಿಸಿದರು.

ಮೊದಲ 30 ಓವರ್‌ಗಳಲ್ಲಿ ಭಾರತ 5 ವಿಕೆಟ್‌ ನಷ್ಟಕ್ಕೆ 123 ರನ್‌ಗಳಿಸಿದೆ. 

ಧೋನಿ 19,ಹಾರ್ಧಿಕ್‌ ಪಾಂಡ್ಯಾ 24 ರನ್‌ ಗಳಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next