Advertisement

ಬೆಂಗಳೂರು –ಚೆನ್ನೈ ರೈಲ್ವೇ: ಚೀನದ ನೆರವು ಕೋರಿಕೆ

10:00 AM Apr 16, 2018 | Team Udayavani |

ಬೀಜಿಂಗ್‌: ಬೆಂಗಳೂರು – ಚೈನ್ನೈ ರೈಲ್ವೇ ಕಾರಿಡಾರ್‌ ವೇಗ ಹೆಚ್ಚಿಸಲು ಹಾಗೂ ಆಗ್ರಾ ಮತ್ತು ಝಾನ್ಸಿ ನಿಲ್ದಾಣಗಳ ಪುನರಾಭಿವೃದ್ಧಿಗೆ ಭಾರತವು ಚೀನದ ನೆರವು ಕೋರಿದೆ. ಉಭಯ ರಾಷ್ಟ್ರಗಳ ನಡುವೆ ನಡೆದ ಆರ್ಥಿಕ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತ, ಈ ಕುರಿತ ಪ್ರಸ್ತಾವನೆಯನ್ನು ಚೀನ ಮುಂದಿಟ್ಟಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ.

Advertisement

ಆಗ್ರಾ ಮತ್ತು ಝಾನ್ಸಿ ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿ ಕುರಿತ ಪ್ರಸ್ತಾವವನ್ನು ಈ ಹಿಂದೆಯೇ ಚೀನದ ಮುಂದಿಡಲಾಗಿತ್ತು. ಇದೀಗ ಮತ್ತೆ ಪ್ರಸ್ತಾಪಿಸಲಾಗಿದೆ. ರೈಲ್ವೇ ನಿಲ್ದಾಣಗಳ ಅಭಿವೃದ್ಧಿ ಒಂದು ದೊಡ್ಡ ಯೋಜನೆಯಾಗಿದೆ. ಸುಮಾರು 600 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ಯಾವುದಕ್ಕೆ ಬೇಕಾದರೂ ಚೀನ ಬಿಡ್‌ ಮಾಡಬಹುದು ಎಂದು ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next