Advertisement

ODI ವಿಶ್ವಕಪ್‌ ಗೆಲ್ಲಲು ಭಾರತ ಸಿದ್ಧ: ಕಪಿಲ್‌ ದೇವ್‌

10:56 PM Sep 18, 2023 | Team Udayavani |

ಹೊಸದಿಲ್ಲಿ: ತವರಿನಲ್ಲಿ ನಡೆಯಲಿರುವ ಮುಂಬರುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಪ್ರಶಸ್ತಿ ಗೆಲ್ಲಲು ಭಾರತ ಸಿದ್ಧವಾಗಿದೆ. ಆದರೆ ಎಲ್ಲವೂ ಅದೃಷ್ಟವನ್ನು ಅವಲಂಭಿಸಿದ್ದರಿಂದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ವೆಂದು ಹೇಳಲು ಬಯಸುವು ದಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಹೇಳಿದ್ದಾರೆ.

Advertisement

ಒಂದು ವೇಳೆ ನಾವು ಅಗ್ರ ನಾಲ್ಕರೊಳಗಿನ ಹಂತಕ್ಕೆ ಬಂದರೆ ಮತ್ತೆ ಎಲ್ಲರೂ ಅದೃಷ್ಟದ ಬಲದಿಂದ ನಡೆಯುತ್ತದೆ. ಅಗ್ರ ನಾಲ್ಕರೊಳಗಿನ ಹಂತಕ್ಕೆ ಬರುವುದು ಅತ್ಯಂತ ಪ್ರಮುಖವಾ ಗಿದೆ ಎಂದು ಕಪಿಲ್‌ ತಿಳಿಸಿದರು.

ಭಾರತ ತಂಡದ ಬಗ್ಗೆ ಹೇಳುವುದಾದರೆ ಅದು ಆಡಲು, ಪ್ರಶಸ್ತಿ ಗೆಲ್ಲಲು ಸಿದ್ಧವಾಗಿದೆ. ಏಷ್ಯಾ ಕಪ್‌ನಲ್ಲಿನ ಅದ್ಭುತ ನಿರ್ವಹಣೆ ಯಿಂದ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಅದೇ ಉತ್ಸಾಹದಲ್ಲಿ ವಿಶ್ವಕಪ್‌ನಲ್ಲೂ ಆಡಿದರೆ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next