Advertisement

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

11:58 PM Jan 28, 2022 | Team Udayavani |

ಹೊಸದಿಲ್ಲಿ: ಭಾರತ-ಅಮೆರಿಕ ಮುಸ್ಲಿಂ ಕೌನ್ಸಿಲ್‌ನಲ್ಲಿ ಭಾರತದ ಮಾನವ ಹಕ್ಕಿನ ಪರಿಸ್ಥಿತಿ ಹೀನಾ ಯವಾಗಿದೆ ಎಂದು ಹೇಳಿದ್ದ ಮಾಜಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ವಿರುದ್ಧ ವಿದೇಶಾಂಗ ಸಚಿವಾಲಯ ಕಿಡಿ ಕಾರಿದೆ.

Advertisement

“ಭಾರತದ ಅಭೂತ ಪೂರ್ವ ಪ್ರಜಾಪ್ರಭುತ್ವದ ಬಗ್ಗೆ ಬೇರೆಯವರಿಂದ ಪ್ರಮಾಣ ಪತ್ರ ಬೇಕಾಗಿಲ್ಲ’ ಎಂದು ಸಚಿವಾಲಯ ಹೇಳಿದೆ.

ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗ್ಚಿ ಮಾತನಾಡಿದ್ದು, “ಆ ಕಾರ್ಯಕ್ರಮವನ್ನು ಆಯೋಜಿಸಿದವರ ಹಿನ್ನೆಲೆ, ಹಿಂದಿನ ದಾಖಲೆ ಎಲ್ಲರಿಗೂ ತಿಳಿದಿದೆ. ಅವರು ಪಕ್ಷಪಾತ ಮಾಡಿದ್ದು ಗೊತ್ತಿದೆ’ ಎಂದು ಹೇಳಿದ್ದಾರೆ. ಹಾಗೆಯೇ ಪಾಕಿಸ್ಥಾನ ಮೊದಲು ಬಲೂಚಿಸ್ಥಾನ ದಲ್ಲಿ ಮಾನವ ಹಕ್ಕು ಉಲ್ಲಂಘನೆಯನ್ನು ನಿಲ್ಲಿಸ ಬೇಕು ಎಂದೂ ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next