Advertisement

ಭಾರತ ಗೆಲ್ಲಬೇಕಿದೆ, ಅದಕ್ಕಾಗಿ ಐಪಿಎಲ್ ಅಮಾನತಾಗಿದೆ: ಮುಂಬೈ ಪೊಲೀಸರ ಟ್ವೀಟ್

09:29 AM Apr 20, 2020 | keerthan |

ಮುಂಬೈ: ಕೋವಿಡ್-19 ಸೋಂಕಿನ ಕಾರಣದಿಂದ ವರ್ಣರಂಜಿತ ಕ್ರೀಡಾಕೂಟ ಐಪಿಎಲ್ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಗುರುವಾರ ಬಿಸಿಸಿಐ ಐಪಿಎಲ್ ಮುಂದೂಡಿಕೆಯ ಬಗ್ಗೆ ಅಧಿಕೃತವಾಗಿ ತಿಳಿಸಿದೆ.

Advertisement

ಈ ನಿರ್ಧಾರವನ್ನು ಸ್ವಾಗತಿಸಿರುವ ಮುಂಬೈ ಪೊಲೀಸರು, ಐಪಿಎಲ್ ಅಮಾನತು ಆಗದೆ ಯಾಕೆಂದರೆ ಭಾರತ ಗೆಲ್ಲಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮುಂಬೈ ಪೊಲೀಸರಿಗೆ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್) ಗೆ ಹೊಸ ಅರ್ಥ ನೀಡಿದ್ದಾರೆ. ಮುಂಬೈ ಪೊಲೀಸರು ಇಂಡಿಯಾ ಪ್ರಾಕ್ಟಿಸಿಂಗ್ ಲಾಕ್ ಡೌನ್ ( ಭಾರತ ಲಾಕ್ ಡೌನ್ ಪಾಲಿಸುತ್ತಿದೆ) ಎಂಬರ್ಥದಲ್ಲಿ ಐಪಿಎಲ್ ಅನ್ನು ಬಿಂಬಿಸಿದ್ದಾರೆ.

ಭಾರತದ ನಗರಗಳು ಎದುರಾಳಿಯಾಗಿ ಆಡುವುದಿಲ್ಲ. ಈಗ ದೇಶ ಒಂದಾಗಿ ಕೋವಿಡ್-19 ವೈರಸ್ ವಿರುದ್ಧ ಸೆಣಸಾಡುತ್ತದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next