Advertisement

ಅತಂತ್ರ ಸ್ಥಿತಿಯಲ್ಲಿ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

12:10 AM Mar 01, 2020 | Team Udayavani |

ಹೊಸದಿಲ್ಲಿ: ಮಾರ್ಚ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆಯಬೇಕಿರುವ ಶೂಟಿಂಗ್‌ ವಿಶ್ವಕಪ್‌ ಕೊರೊನಾ ವೈರಸ್‌ ಪರಿಣಾಮದಿಂದ ರದ್ದಾಗುವ ಸ್ಥಿತಿಯಲ್ಲಿದೆ. ಇದರ ನಡುವೆಯೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಅತ್ಯಂತ ಮಹತ್ವದ್ದಾಗಿರುವ, ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಕೂಟವೂ ಅಪಾಯಕ್ಕೆ ಸಿಲುಕಿದೆ.

Advertisement

ಭಾರತ ವಿದೇಶಾಂಗ ಇಲಾಖೆ ಈಗಾ ಗಲೇ ಚೀನ ಆಟಗಾರರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಎಂದು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಗೆ ಸೂಚಿಸಿದೆ. ಇದನ್ನು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ, ಚೀನದ ಬ್ಯಾಡ್ಮಿಂಟನ್‌ ಸಂಸ್ಥೆಗೆ ರವಾನೆ ಮಾಡಿ ಉತ್ತರಕ್ಕಾಗಿ ಕಾದು ಕುಳಿತಿದೆ.

ಕೊರೊನಾ ಭೀತಿ
ಚೀನ ಬ್ಯಾಡ್ಮಿಂಟನ್‌ ಪಟುಗಳಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಈ ಪಂದ್ಯಾವಳಿ ಅನಿವಾರ್ಯವಾಗಿದೆ. ಇದನ್ನು ತಪ್ಪಿಸಿಕೊಳ್ಳಲು ಅವರು ಸಿದ್ಧರಿಲ್ಲ. ಅವರನ್ನು ಸೇರಿಸಿಕೊಂಡರೆ, ಕೊರೊನಾ ಭಾರತವನ್ನು ಪ್ರವೇಶಿಸುವ ಭೀತಿ ಎದುರಾಗಲಿದೆ. ಒಂದು ಆಶಾ ದಾಯಕ ಸಂಗತಿಯೆಂದರೆ, ಚೀನ ಬಹುತೇಕ ಬ್ಯಾಡ್ಮಿಂಟನ್‌ ಆಟಗಾರರೆಲ್ಲ ವಿದೇಶಗಳಲ್ಲೇ ಇದ್ದಾರೆ. ಆದ್ದರಿಂದ ಅವರನ್ನು ಭಾರತಕ್ಕೆ ಕರೆಸಿಕೊಳ್ಳು ವುದರಿಂದ ಯಾವುದೇ ಅಪಾಯ ಎದುರಾಗುವ ಸಾಧ್ಯತೆ ಇಲ್ಲ. ಸದ್ಯ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ಮುಂದಿರುವ ಆಶಾವಾದ ಇದೊಂದೇ.ಈ ನಡುವೆ ಮಾ. 24ರಿಂದ 29ರ ವರೆಗೆ ನಡೆಯಬೇಕಿರುವ ಬ್ಯಾಡ್ಮಿಂಟನ್‌ ಪಂದ್ಯಾವಳಿ ನಡೆ ಯುವ ಬಗ್ಗೆಯೇ ಅನುಮಾನವಿದೆ. ಕಡೆಯ ಹಂತದಲ್ಲಿ ಕೂಟ ರದ್ದಾದರೂ ಅಚ್ಚರಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next