Advertisement

ಭಾರತದ್ದು ವಿಶ್ವದಲ್ಲೇ ಅತ್ಯಂತ ವಿಶಾಲ ಸಂವಿಧಾನ: ನಿಸಾರ್‌ ಅಹಮ್ಮದ್‌

09:51 AM Feb 01, 2020 | sudhir |

ಕುಂಬಳೆ: ದೇಶ ಎದುರಿಸುವ ಯಾವುದೇ ಪ್ರಶ್ನೆಗಳಿಗೆ ಭಾರತದ ಸಂವಿಧಾನದಲ್ಲಿ ಪರಿಹಾರವಿದೆ.ವಿಶ್ವದ ಅತ್ಯಂತ ವಿಶಾಲ ಸಂವಿಧಾನ ಭಾರತದ ಸಂವಿಧಾನವಾಗಿರುವುದಾಗಿ ಕಾಸರಗೋಡು ಜಿಲ್ಲಾ ನ್ಯಾಯಾಧೀಶ, ರಾಜ್ಯ ಲೀಗಲ್‌ ಸರ್ವಿಸ್‌ ಅಥೋರಿಟಿ ಸದಸ್ಯ ನಿಸಾರ್‌ ಅಹಮ್ಮದ್‌ ಕೆ.ಟಿ. ಹೇಳಿದರು.

Advertisement

ಜಿಲ್ಲಾ ಲೀಗಲ್‌ ಸರ್ವಿಸ್‌ ಸೊಸೈಟಿ ಆಶ್ರಯದಲ್ಲಿ ಒಂದು ವರ್ಷ ಕಾಲ ಆಯೋಜಿಸಿದ ಭಾರತದ ಸಂವಿಧಾನ ವನ್ನು ವಿವರಿಸುವ ಪ್ರಚಾರ ಕಾರ್ಯಕ್ರಮದ ಪ್ರಥಮ ಕಾರ್ಯಕ್ರಮ ವನ್ನು ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ ಕಾಸರಗೋಡು ಪೆರಿಯದಲ್ಲಿ ಉದ್ಘಾಟಿಸಿ ನ್ಯಾಯಾಧೀಶರು ಮಾತನಾಡಿದರು.

ಲೀಗಲ್‌ ಸರ್ವಿಸ್‌ ಅಥೋರಿಟಿ ಕಾಸರಗೋಡು ಜಿಲ್ಲಾಧ್ಯಕ್ಷ, ಸತ್ರ ನ್ಯಾಯಾಧೀಶ ಡಿ. ಅಜಿತ್‌ಕುಮಾರ್‌ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ವಿವಿ ಸಹ ಕುಲಪತಿ ಸಂವಿಧಾನದ 70ನೇ ವಾರ್ಷಿಕಾಚರಣೆಯ ರಾಜ್ಯ ನೋಡಲ್‌ ಅಧಿಕಾರಿ ಡಾ| ಕೆ. ಜಯಪ್ರಸಾದ್‌, ಜಿಲ್ಲಾ ಸರಕಾರಿ ಅಭಿಯೋಜಕ ನ್ಯಾಯವಾದಿ ದಿನೇಶ್‌ ಕುಮಾರ್‌ ಕೆ., ಕಾಸರಗೋಡು ನ್ಯಾಯವಾದಿಗಳ ಸಂಘದ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್‌ ಕುಮಾರ್‌, ಚೀಫ್‌ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಮುಜೀಬ್‌ ರಹಿಮಾನ್‌ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next