Advertisement

ಮೆಹುಲ್‌ ಚೋಕ್ಸಿ ಬಂಧನಕ್ಕೆ ಆಂಟಿಗಾ ಅಧಿಕಾರಿಗಳಿಗೆ ಭಾರತ ಮನವಿ

12:31 PM Jul 30, 2018 | Team Udayavani |

ಹೊಸದಿಲ್ಲಿ : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,600 ಕೋಟಿ ರೂ.ಗಳ ವಂಚನೆ ಹಗರಣದ ಮಾಸ್ಟರ್‌ ಮೈಂಡ್‌ ಆಗಿರುವ, ದೇಶದಿಂದ ಪಲಾಯನ ಮಾಡಿರುವ, ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿಯ ಚಿಕ್ಕಪ್ಪ ಮೆಹುಲ್‌ ಚೋಕ್ಸಿ ಕ್ಯಾರಿಬ್ಬಿಯನ್‌ ದ್ವೀಪದಲ್ಲಿ ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸುವಂತೆ ಭಾರತ, ಆಂಟಿಗಾ ಮತ್ತು ಬರ್‌ಬುಡಾ ಅಧಿಕಾರಿಗಳನ್ನು ಅಧಿಕೃತವಾಗಿ ಕೋರಿದೆ ಎಂದು ಸರಕಾರದ ಮೂಲಗಳು ಇಂದು ಸೋಮವಾರ ತಿಳಿಸಿವೆ. 

Advertisement

ಕ್ಯಾರಿಬ್ಬಿಯನ್‌ ದ್ವೀಪಗಳಲ್ಲಿ ಮೆಹುಲ್‌ ಚೋಕ್ಸಿ ಇರುವುದು ಪತ್ತೆಯಾಗಿದೆ; ಆದುದರಿಂದ ಆತ ಜಲ, ನೆಲ ಮತ್ತು ವಾಯು ಮಾರ್ಗದ ಮೂಲಕ ನಡೆಸುವ ಚಲನ ವಲನಗಳ ಮೇಲೆ ಕಣ್ಣಿಟ್ಟು ಆತನನ್ನು ನಿರ್ಬಂಧಿಸಿ ಬಂಧಿಸುವಂತೆ ಆಂಟಿಗಾ ಮತ್ತು ಬರ್‌ಬುಡಾ ಅಧಿಕಾರಿಗಳನ್ನು ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next