Advertisement

ಪೂರ್ವ ಲಡಾಖ್ ನಲ್ಲಿ ವಾಯುಪಡೆಯನ್ನು ನಿಯೋಜಿಸಿದ ಭಾರತ

12:57 PM Jun 28, 2020 | keerthan |

ಹೊಸದಿಲ್ಲಿ: ಪೂರ್ವ ಲಡಾಖ್ ನಲ್ಲಿ ನೆರೆ ರಾಷ್ಟ್ರ ಚೀನಾ ಪಡೆಗಳ ಯಾವುದೇ ಆಕ್ರಮಣಕಾರಿ ಕ್ರಮವನ್ನು ತಡೆಯುವ ಮಿಲಿಟರಿ ಸನ್ನದ್ದತೆಯ ಯೋಜನೆಯ ಭಾಗವಾಗಿ ಭಾರತವು ಸೂಕ್ಷ್ಮ ಪ್ರದೇಶಗಳಲ್ಲಿ ತನ್ನ ವಾಯು ಪಡೆಯನ್ನು ನಿಯೋಜಿಸಿದೆ.

Advertisement

ಕಳೆದ ಜೂನ್ 15ರಂದು ಗಾಲ್ವಾನ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಅದೇ ರೀತಿ ಚೀನಾದ ಕಮಾಂಡಿಗ್ ಆಫೀಸರ್ ಸೇರಿದಂತೆ 40 ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಪರಿಸ್ಥಿತಿಯಲ್ಲಿ ಮುಂಬರುವ ಎಲ್ಲಾ ಸಂಭವನೀಯತೆಗಳಿಗೆ ನಾವು ಸಿದ್ದರಿದ್ದೇವೆ ಎನ್ನುವಂತಹ ವಾತಾವರಣ ಮೂಡಿಸಲು ಈ ವಾಯು ಪಡೆ ನಿಯೋಜನೆಯಂತಹ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಗಡಿಯಲ್ಲಿ ಚೀನಾದ ಪಡೆಯ ಮಿಲಿಟರಿ ರಚನೆಗೆ ಅನುಗುಣವಾಗಿ ನಾವು ನಮ್ಮ ಸೇನೆಯನ್ನು ನಿಯೋಜನೆ ಮಾಡುತ್ತಿದ್ದೇವೆ. ಎಲ್ ಎಸಿಯಲ್ಲಿ ಕಟ್ಟುನಿಟ್ಟಿನ ಪಹರೆ ನಡೆಸಲಾಗುತ್ತದೆ. ಚೀನಾದ ಪಡೆಗಳ ಯಾವುದೇ ಬೆದರಿಕೆ ಕ್ರಮಗಳಿಗೆ ತಕ್ಷಣ ಪ್ರತಿಕ್ರಯಿಸಲು ಸಂಪೂರ್ಣ ಸಿದ್ದರಾಗಿದ್ದೇವೆ ಎಂದು ಸೇನೆಯ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next