Advertisement

ಮುಂದಿನ ವರ್ಷ ಭಾರತದಲ್ಲಿ ‘ನೋ ಮನಿ ಫಾರ್‌ ಟೆರರ್‌’ಸಮ್ಮೇಳನ

09:43 AM Nov 08, 2019 | Hari Prasad |

ಮೆಲ್ಬರ್ನ್: ಭಯೋತ್ಪಾದಕರಿಗೆ ಹಣಕಾಸಿನ ನೆರವು ಇಲ್ಲ (ನೋ ಮನಿ ಫಾರ್‌ ಟೆರರ್‌) ಸಮ್ಮೇಳನ ಮುಂದಿನ ವರ್ಷ ಭಾರತದಲ್ಲಿ ನಡೆಯಲಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ಹೇಳಿದ್ದಾರೆ. ಮೆಲ್ಬರ್ನ್ ನಲ್ಲಿ ಮಾತನಾಡಿದ ಅವರು, ವಿಶ್ವದ 100ಕ್ಕೂ ಅಧಿಕ ದೇಶಗಳ ಆರ್ಥಿಕ ಗುಪ್ತಚರ ಘಟಕಗಳು (ಎಫ್ಐಯು) ಸೇರಿಕೊಂಡು ಈ ಸಮ್ಮೇಳನ ಆಯೋಜಿಸಲಿವೆ ಎಂದಿದ್ದಾರೆ.

Advertisement

ಕೆಲವು ವರ್ಷಗಳ ಹಿಂದೆ ಉಗ್ರ ಕೃತ್ಯಗಳಿಗೆ ವಿತ್ತೀಯ ನೆರವು ಹೆಚ್ಚಾಗುತ್ತಿರುವುದನ್ನು ಕಂಡು ಬೆಲ್ಜಿಯಂನಲ್ಲಿ ವಿವಿಧ ದೇಶಗಳ ಆರ್ಥಿಕ ಗುಪ್ತಚರ ಘಟಕಗಳು ಅನೌಪಚಾರಿಕ ಸಭೆ ನಡೆಸಿ ಅಂತಾರಾಷ್ಟ್ರೀಯ ಸಹಕಾರ ಪಡೆವ ಬಗ್ಗೆ ನಿರ್ಧರಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next